ಎಚ್.ಎಸ್.ವಿ ಕಾವ್ಯ: ಒಂದು ಅಧ್ಯಯನ

Author : ಟಿ.ಪಿ. ಅಶೋಕ

Pages 180

₹ 150.00




Year of Publication: 2021
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಗೋಕುಲ ಮೂರನೆಯ ಹಂತ, ಮೈಸೂರು - 570002

Synopsys

ಖ್ಯಾತ ವಿಮರ್ಶಕ ಡಾ. ಟಿ.ಪಿ. ಅಶೋಕ ಅವರು ಕವಿ ಹಾಗೂ ಸಾಹಿತಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ (ಎಚ್ ಎಸ್ ವಿ) ಅವರ ಸಮಗ್ರ ಕವಿತೆಗಳನ್ನು ವಿಮರ್ಶಿಸಿದ ಕೃತಿ ಇದು. ಭಾವಗೀತೆಗಳ ಕವಿಯೂ ಆದ ಎಚ್.ಎಸ್. ವಿ ಅವರು ಹತ್ತು ಹಲವು ವೈಚಾರಿಕ ಕವನಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಅವುಗಳ ಕೊಡುಗೆಯ ಸ್ವರೂಪವನ್ನು ವಿಮರ್ಶಕ ಡಾ. ಟಿ.ಪಿ. ಅಶೋಕ ಅವರು ವಿಮರ್ಶಿಸಿದ್ದು, ಕವಿಗಳ ಕವನಗಳ ವಿಮರ್ಶೆ ಕುರಿತು ಉತ್ತಮ ಮಾರ್ಗದರ್ಶಿಯಾಗಿ ಈ ಕೃತಿಯು ಓದುಗರ ಆಸಕ್ತಿಯನ್ನು ಸೆಳೆಯುತ್ತದೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books