ಕೆಲವು ವಿಶ್ವವಿಖ್ಯಾತ ಕಾದಂಬರಿಗಳ ಸಾರಸರ್ವಸ್ವ ಒಳಗೊಂಡ ಕೃತಿ ‘ಕುಮುದಿನಿ ಹಾಗೂ ಇತರ ಕಾದಂ-ಕಥನಗಳು’ ಈ ಕೃತಿ ಲೇಖಕ ಶ್ರೀನಿವಾಸ ಹಾವನೂರ ಕಾದಂಕಥನಗಳ ದ್ವಿತೀಯ ಸಂಗ್ರಹ. ಮೊದಲನೆಯದಾದ ಮಾತಂಗಿ ಮತ್ತು ಇತರೆ..ಸಂಗ್ರಹಕ್ಕೆ (1982)ದೊರೆತ ಯಶಸ್ಸಿನ ಪ್ರೇರೇಪಣೆಯಿಂದ ಈ ಕೃತಿ ರಚಿಸಿರುವುದಾಗಿ ತಿಳಿಸಿದ್ದಾರೆ. ಇದು ಕಾದಂಬರಿಯ ಡೈಜೆಸ್ಟ್ ಅಥವಾ ಸಾರಾಂಶವಲ್ಲ. ಇಂಗ್ಲಿಶ್ ನಲ್ಲಿಯ ಮ್ಯಾಕ್ಮಿಸನ್ ಸೀರೀಜ್ ನಂತೆ ಎಳೆಯರಿಗಾಗಿ ಬರೆದ ಕಥಾಸಾರವಲ್ಲ. ಬದಲಾಗಿ ಕಾದಂಬರಿಯೊಂದರ ಕತೆಯ ಮೆಯ್ಗಿಡಲೀಯದೆ ಅದರ ಕೆಲವು ಹೃದ್ಯವಾದ ಸನ್ನಿವೇಶಗಳನ್ನು ಯಥಾವತ್ತಾಗಿ ಕೊಡುತ್ತ. ಆ ಮೂಲಕ ಹೇಳಲಾದ ಕಥನವಿದು. ಕಾದಂಬರಿ ಕನ್ನಡದ್ದೇ ಇದ್ದಾರ, ಕಾದಂಬರಿಕಾರನ ನುಡಿಗಟ್ಟನ್ನು ಚಾಚೂ ತಪ್ಪದಂತೆ ಉಳಿಸಿಕೊಳ್ಳಬಹುದು. ಅದರಿಂದ ಮೂಲ ಕೃತಿಯನ್ನೇ ಸಂಕ್ಷೇಪದಲ್ಲಿ ಓದಿದಂತಾಗಿ ರಸಾನುಭವ ಪಡೆಯುವುದು ಸಾಧ್ಯ. ಜಗತ್ಪ್ರಸಿದ್ಧವಾದ ಸರ್ವೋತ್ಕೃಷ್ಟ ಕಾದಂಬರಿಗಳನ್ನು ಇಷ್ಟೊಂದು ಸುಲಭ-ಸರಳವಾದ ರೀತಿಯಲ್ಲಿ ಪರಿಚಯಿಸಿಕೊಳ್ಳುವ ಮಾರ್ಗ ಬೇರೊಂದಿಲ್ಲ ಎಂದಿದ್ದಾರೆ ಶ್ರೀನಿವಾಸ ಹಾವನೂರು.
ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...
READ MORE