ಅಬ್ದುಲ್ ಹಮೀದ್

Author : ಲಕ್ಷ್ಮಣ ಕೊಡಸೆ

Pages 52

₹ 12.00




Year of Publication: 2015
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು- 560019

Synopsys

ಭಾರತದ ಪರಮವೀರ ಚಕ್ರ ಪ್ರಶಸ್ತಿಗೆ ಭಾಜನರಾದ ಯೋಧ ಅಬ್ದುಲ್ ಹಮೀದ್ ಅವರ ಬದುಕು ಹಾಗೂ ಸಾಹಸಗಳನ್ನು ಚಿತ್ರಿಸುವ ಕೃತಿಯನ್ನು ಲೇಖಕ ಲಕ್ಷ್ಮಣ ಕೊಡಸೆ ಬರೆದಿದ್ದಾರೆ. ಪಾಕಿಸ್ತಾನದೊಂದಿಗೆ 1965ರಲ್ಲಿ ನಡೆದ ಯುದ್ಧದಲ್ಲಿ ಭಾರತ ನಿರ್ಣಾಯಕ ಗೆಲುವು ಸಾಧಿಸಲು ಹೋರಾಟ ನಡೆಸಿದ ಅಸಂಖ್ಯಾತ ಯೋಧರಲ್ಲಿ ಅಬ್ದುಲ್ ಹಮೀದ್ ಒಬ್ಬರು. ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ದಾಮಪುರ ಎಂಬ ಹಳ್ಳಿಯಲ್ಲಿ ಸೇನೆಯಲ್ಲಿ ಲಾನ್ಸ್ ನಾಯಕ್ ಆಗಿ ಸೇವೆ ಸಲ್ಲಿಸಿದ್ದ ಮಹಮದ್ ಉಸ್ಮಾನ್ ಪುತ್ರನಾಗಿ ಜನಿಸಿದ ಅಬ್ದುಲ್ ಹಮೀದ್ ಮುಂದೆ ಭಾರತೀಯ ಸೇನೆಯ ತುಪಾಕಿ ದಳ ಸೇರಿ ಪಾಕಿಸ್ತಾನದ ಹಲವಾರು ಟ್ಯಾಂಕ್ ಗಳನ್ನು ಉರುಳಿಸಿ ಹುತಾತ್ಮರಾದರು. ಪರಮವೀರ ಚಕ್ರ ಪ್ರಶಸ್ತಿಗೆ ಭಾಜನರಾದ ಏಕೈಕ ಮುಸ್ಲಿಂ ಯೋಧ.

About the Author

ಲಕ್ಷ್ಮಣ ಕೊಡಸೆ
(12 April 1953)

ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.  ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು.    ...

READ MORE

Related Books