ದೇವಿಪ್ರಸಾದ್ ಚಟ್ಟೋಪಾಧ್ಯಾಯ

Author : ಎನ್. ಗಾಯತ್ರಿ (ಬೆಂಗಳೂರು)

Pages 48

₹ 27.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು
Phone: 08022161900

Synopsys

ವೈಚಾರಿಕ ಜಗತ್ತಿನ ಧ್ರುವತಾರೆ ಎಂಬ ಉಪಶೀರ್ಷಿಕೆಯಡಿ ಚಿಂತಕ ದೇವಿಪ್ರಸಾದ್ ಚಟ್ಟೋಪಾಧ್ಯಾಯ ( ಜನನ19 ನವೆಂಬರ್ 1918 , ಮರಣ 8 ಮೇ 1993) ಅವರ ಬದುಕು-ಸಾಧನೆ ಕುರಿತು ವ್ಯಕ್ತಿ ಚಿತ್ರಣವನ್ನು ಲೇಖಕಿ ಎನ್. ಗಾಯತ್ರಿ ಅವರು ಕಟ್ಟಿಕೊಟ್ಟಿರುವ ಕೃತಿ ಇದು.ದೇವಿಪ್ರಸಾದ ಚಟ್ಟೋಪಾಧ್ಯಾಯರು ಮಾರ್ಕ್ಸ್ ವಾದಿಗಳಾಗಿದ್ದು, ಪ್ರಾಚೀನ ಭಾರತದ ತತ್ವಶಾಸ್ತ್ರದಲ್ಲೂ ವಸ್ತುನಿಷ್ಠತೆ, ಭೌತಿಕತೆ ಹಾಗೂ ವಾಸ್ತವವಾದದ ವ್ಯವಹಾರಗಳ ಕುರಿತು ಪ್ರಸ್ತಾಪವಿರುವುದನ್ನು ಸಂಶೋಧಿಸಿ ಅವರು ಹತ್ತು ಹಲವು ಲೇಖನಗಳನ್ನು ಬರೆದಿದ್ದಾರೆ. `ಲೋಕಾಯತ: ಪ್ರಾಚೀನ ಭಾರತೀಯ ಭೌತವಾದದಲ್ಲಿ ಒಂದು ಅಧ್ಯಯನ' ಎಂಬುದು ಇವರ ಪ್ರಸಿದ್ಧ ಕೃತಿ. ಚಟ್ಟೋಪಾಧ್ಯಾಯರ ವ್ಯಕ್ತಿತ್ವ, ಚಿಂತನಾ ಕ್ರಮ, ಬದುಕಿನ ರೀತಿಯ ವಿವಿಧ ಆಯಾಮಗಳನ್ನು ಇಲ್ಲಿ ಕಾಣಬಹುದು. ನವ ಕರ್ನಾಟಕ ಪ್ರಕಾಶನವು ‘ವಿಶ್ವಮಾನ್ಯರು’  ಮಾಲೆಯಡಿ ಪ್ರಕಟಿಸಿದೆ. ಕೃತಿಯನ್ನು ಡಾ. ನಾ. ಸೋಮೇಶ್ವರ ಅವರು ಸಂಪಾದಿಸಿದ್ದಾರೆ. 

 

About the Author

ಎನ್. ಗಾಯತ್ರಿ (ಬೆಂಗಳೂರು)
(17 January 1957)

ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.  ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...

READ MORE

Related Books