ಅಂಬೇಡ್ಕರ್ ವಾದಿ ಡಿ.ಎಂ. ತಿಮ್ಮರಾಯಪ್ಪ

Author : ವಿ. ಮುನಿವೆಂಕಟಪ್ಪ

Pages 106

₹ 100.00




Year of Publication: 2011
Published by: ವಿಚಾರವಾದಿ ಪ್ರಕಾಶನ
Address: # 1240, 3ನೇ ಅಡ್ಡರಸ್ತೆ, ಗಂಗೆ ರಸ್ತೆ, ಕುವೆಂಪುನಗರ, ಮೈಸೂರು-570023
Phone: 9448746650

Synopsys

ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಅಂಬೇಡ್ಕರ್ ವಾದಿ ಡಿ.ಎಂ. ತಿಮ್ಮರಾಯಪ್ಪ. ಕರ್ನಾಟಕದಲ್ಲಿ ದಲಿತ ಚಳವಳಿ ಆರಂಭ ಹಂತದಲ್ಲಿ (1972) ಕೋಲಾರ ಜಿಲ್ಲೆಯಿಂದ ಡಿ.ಎಂ. ತಿಮ್ಮರಾಯಪ್ಪನವರ ಹೆಸರು ತುಂಬಾ ಪ್ರಸಿದ್ಧಿಯಲ್ಲಿತ್ತು. ಅಂಬೇಡ್ಕರ್ ಅವರ ವಿಚಾರಗಳನ್ನು ತಮ್ಮ ಉಸಿರಾಗಿಸಿಕೊಂಡಿದ್ದ ಅವರು ದಲಿತ ಚಳವಳಿಗೆ ಮತ್ತಷ್ಟು ಚಾಲನೆ ನೀಡಲು ದಲಿತ ಕ್ರಿಯಾ ಸಮಿತಿ ಎಂಬ ಹೊಸ ಸಂಘಟನೆಯನ್ನು ಹುಟ್ಟು ಹಾಕಿದರು. 1974ರಲ್ಲಿ ಭದ್ರಾವತಿಯಲ್ಲಿ ಬಿ. ಕೃಷ್ಣಪ್ಪನವರ ನೇತೃತ್ವದ ದಲಿತ ಸಂಘರ್ಷ ಸಮಿತಿ ಅಸ್ತಿತ್ವಕ್ಕೆ ಬಂದಿತು. ಹೀಗೆ ಈ ಸಮಿತಿಗಳು ಅಸ್ತಿತ್ವಕ್ಕೆ ಬಾರದಿದ್ದರೆ ದಲಿತ ಚಳವಳಿಗೆ ಕಸುವು ಬರುತ್ತಿರಲಿಲ್ಲ. ಇಂತಹ ಐತಿಹಾಸಿಕ ಸತ್ಯಗಳನ್ನು ತೆರೆದು ತೋರುವ ಮೂಲಕ ಹಾಗೂ ನಾಯಕ ಡಿ.ಎಂ. ತಿಮ್ಮರಾಯಪ್ಪ ಅವರ ವ್ಯಕ್ತಿತ್ವ ಮತ್ತು ಹೋರಾಟದ ಪರಿಗಳ ಅನಾವರಣ ಈ ಕೃತಿಯಲ್ಲಿದೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books