ಡಾ. ಬಿ.ಆರ್. ಅಂಬೇಡ್ಕರ್

Author : ಕಾಶೀನಾಥ ಅಂಬಲಗೆ

Pages 52

₹ 25.00




Year of Publication: 2018
Published by: ಪ್ರಗತಿ ಪ್ರಕಾಶನ
Address: # 39, ಬೇವು ಬೆಲ್ಲ, ಕುಸನೂರು ರಸ್ತೆ, ಜಯನಗರ, ಕಲಬುರಗಿ-585105

Synopsys

ಒಂದು ಮಗು ಈ ಜಗತ್ತನ್ನು ಜಿಜ್ಞಾಸೆಯಿಂದ ನೋಡಿ ಕಲಿಯಲಿ, ಓದಿನ ಖುಷಿ ಅನುಭವಿಸಲಿ ಎಂಬ ಕಾರಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಅವರಂತಹ ಮಹನೀಯರ ಜೀವನ ಸಾಧನೆಗಳನ್ನು ಅತ್ಯಂತ ಸರಳವಾಗಿ ಮಕ್ಕಳಿಗೆ ತಿಳಿಯುವ ಹಾಗೆ ತಾವು ಬರೆದಿರುವುದಾಗಿ ಲೇಖಕ ಡಾ. ಕಾಶೀನಾಥ ಅಂಬಲಗೆ ಕೃತಿಯ ಆರಂಭದಲ್ಲೇ ಹೇಳಿದ್ದಾರೆ. ಸಾವಿತ್ರಿಬಾಯಿ ಫುಲೆ, ಬಾಬಾ ಆಮ್ಟೆ, ಮಹಾತ್ಮ ಜ್ಯೋತಿಬಾ ಫುಲೆ, ವಿವೇಕಾನಂದರು ಹೀಗೆ ಈ ಮಹನೀಯರು ಮಾನವೀಯತೆ ತೋರಿ ಜಗತ್ತನ್ನು ಸುಂದರಗೊಳಿಸಿದ್ದು, ಮಕ್ಕಳೂ ಸಹ ಈ ಬಗ್ಗೆ ತಿಳಿದು, ತಮ್ಮ ಬದುಕು ಸುಂದರವಾಗಿಸಿಕೊಳ್ಳಲಿ ಎಂದು ಲೇಖಕರು ಆಶಿಸಿದ್ದಾರೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books