ಶಿಶುನಾಳ ಶರೀಫ ಶಿವಯೋಗಿ

Author : ಚಂದ್ರಗೌಡ ಕುಲಕರ್ಣಿ

Pages 84

₹ 50.00




Year of Publication: 2011
Published by: ಚನ್ನವೀರ ಪ್ರತಿಷ್ಠಾನ ಪ್ರಕಾಶನ
Address: ಸಾರಂಗಮಠ, ಸಿಂದಗಿ, ವಿಜಯಪುರ ಜಿಲ್ಲೆ

Synopsys

ಶಿಶುನಾಳ ಶರೀಫ ಶಿವಯೋಗಿ (ಜೀವನ ಚರಿತ್ರೆ ಮಕ್ಕಳಿಗಾಗಿ ) ಮಕ್ಕಳ ಹಾಡು , ತೊದಲುನುಡಿ, ಆಟದೊಂದಿಗೆ ಬೆಸೆದು ಅವರಿಗೆ ಪರಿಚಿತವಾದ ಸಂಗತಿಯಿಂದಲೇ ಪ್ರಾರಂಭ ಮಾಡಿ, ಅವರಲ್ಲಿ ಕುತೂಹಲದ ಪ್ರಶ್ನೆಗಳನ್ನು ಹುಟ್ಟುಹಾಕಿ ಕಥನ ಕಟ್ಟುವ ವಿಶಿಷ್ಟ ತಂತ್ರವನ್ನು ಅಳವಡಿಸಿದ ಕೃತಿ- ಶಿಶುನಾಳ ಶರೀಫ ಶಿವಯೋಗಿ.

ಭಜನಾ ಪದ ಕೇಳಿದ ಮಕ್ಕಳು ತೊದಲ್ನುಡಿಯಲ್ಲಿ ಅವುಗಳನ್ನು ಹಾಡಿಕೊಳ್ಳುವ ಬಿಂದುವಿನಿಂದ ಕತೆ ಬಿಚ್ಚಿಕೊಳ್ಳುತ್ತವೆ. ಸಂಜೀವಿನಿ ಶಕ್ತಿಯಾದ ಕತೆ ಮಕ್ಕಳ ಗುಂಪಿನ ಪ್ರಶ್ನೆಗಳಿಂದ ಸಿಂಧುವಿನೆಡೆಗೆ ಸಾಗುತ್ತದೆ. ಚಂದಪ್ಪ ಚಂದ ಕೊಡನ ಕುಂಬಾರ ಮಾಡಿದ ಕೊಡನವ್ವ.. ಈ ಹಾಡು ಬರೆದವರು ಶರೀಫ. ಅವರ ಊರು, ತಂದೆ ತಾಯಿ, ವಿದ್ಯಾಭ್ಯಾಸ, ಗುರು, ಬರೆದ ಪದಗಳು, ತಿರುಗಾಡಿದ ಹಳ್ಳಿ, ಸಂಪರ್ಕಿಸಿದ ಸಂತರು...ಹೀಗೆ ಸಾಗುತ್ತ ಮುಂದುವರೆಯುತ್ತದೆ. ಸಂಗಪ್ಪಜ್ಜ ಮತ್ತು ತಮ್ಮಣ್ಣ ಮಾಸ್ತರ ಮಕ್ಕಳೊಂದಿಗೆ ಮಕ್ಳಳಾಗಿ ಜುಗಲ್ ಬಂದಿಯಾಗಿ ನಿರೂಪಣೆ ಮಾಡಿದ್ದು ಸ್ವಾರಸ್ಯಕರವಾಗಿದೆ.

ಕಡದಳ್ಳಿ ಅರ್ಜುನಪ್ಪ ಮಡಿವಾಳರ ಎಂಬ ಶಿಷ್ಯ ತಮ್ಮ ಊರಿನವನೇ ಎಂದು ತಿಳಿದು ಮಕ್ಕಳು ಸಂತಸ ಪಡುತ್ತಾರೆ. ತಮ್ಮ ಭಾವಕೋಶದಲ್ಲಿ ತುಂಬಿಕೊಳ್ಳುತ್ತಾರೆ. ಇಂದಿನ ಹೆಚ್ಚಿನ ಪದಗಳು ಅರ್ಜುನಪ್ಪನಿಂದಲೇ ಸಂಗ್ರಹಿಸಿದವುಗಳು ಎಂಬುದು ಸಂಶೋಧಕ ಡಾ. ಗುಬ್ಬಣ್ಣವರ ಕೃತಿಯಿಂದ ತಿಳಿದುಬರುವುದು. ಈ ಕೃತಿ ಕುರಿತು ಸಾಹೇಬಗೌಡ ಬಿರಾದಾರ ಹೆಗ್ಗನದೊಡ್ಡಿ ಅವರು ಹೇಳಿದ ಮಾತುಗಳು ಮನೋಜ್ಞವಾಗಿವೆ. " ಕತೆ ಕುಟ್ಟುವವರ ಸಂಖ್ಯೆ ಹೆಚ್ಚಾಗಿದೆ ! ಆದರೆ ಕತೆ ತನ್ನಿಂದ ತಾನೆ ಹುಟ್ಟುವುದು ತುಂಬಾ ವಿರಳ. ಅದರಲ್ಲೂ ಮಕ್ಕಳ ಮನಕ್ಕೆ ಹತ್ತಿರವಾಗಿ,ಅವರ ಪ್ರೀತಿಯ ಆಳಕ್ಕೆ ಇಳಿದು ,ಕುತೂಹಲ ಸೆಳೆದು ಸೂಡುಗಟ್ಟಿ ಸುಗ್ಗಿ ಮಾಡಿ,ಹುಗ್ಗಿ ಉಣಿಸುವ ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ತಿಳಿಯುವ ಹಾಗೆ ಬರೆದ  ಲೇಖಕರ ಕೌಶಲ ಗಮನ ಸೆಳೆಯುತ್ತದೆ.

About the Author

ಚಂದ್ರಗೌಡ ಕುಲಕರ್ಣಿ

ಕವಿ, ಲೇಖಕ ಚಂದ್ರಗೌಡ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದವರು. ಹುಟ್ಟೂರು, ಅಮರಗೋಳ, ಧಾರವಾಡ ಹಾಗೂ ನರಗುಂದದಲ್ಲಿ ಶಿಕ್ಷಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವೀಧರರು. ವಿಜಯಪುರ ಜಿಲ್ಲೆಯ ತಾಳಿಕೋಟೆಯ ಖಾಸ್ಗತೇಶ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು.   ಕಥೆ,ಕವನ,  ಪ್ರಾಸಬಂಧ, ಪದಬಂಧ, ಪದಶೋಧ, ಪದಚಲ್ಲಾಟ, ಅಕ್ಷರ ಸುಡೋಕು, ಹುಡುಕಾಟ - ತೊಡಕಾಟ ಅಂಕ ಮೋಡಿಯಲ್ಲಿ ಬೆರೆತ ಮನಸಿಗೆ ಜನಪದ ಲೆಕ್ಕ - ಕವಡ ಕಂಟಗ ಲೆಕ್ಕ, ಒಗಟು, ಬೆಡಗು, ಭಾಷಾ ಚಮತ್ಕಾರ, ಮೋಜಿನ ಮಾಯಾ ಚೌಕ ಹೀಗೆ ವಿವಿಧ ವಲಯದಲ್ಲಿ ಆಸಕ್ತಿ. ದೂರದರ್ಶನದ ಬೆಳಗು ...

READ MORE

Related Books