ನೀತಿ ನಿರಂತರ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 165

₹ 150.00




Year of Publication: 2014
Published by: ಹರ್ಷಾಭಿಷೇಕ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಹಾಗೂ ಕವಿ ಸುಭಾಶ್ಚಂದ್ರ ಕಶೆಟ್ಟಿ, ಬಾಚನಾಳ ಅವರು ರಾಜಶೇಖರ್ ಮಾಲಿಪಾಟೀಲ್ ಅವರ ಬದುಕು-ಸಾಧನೆ ಕುರಿತು ಬರೆದ ಕೃತಿ-ನೀತಿ ನಿರಂತರ. ರಾಜಶೇಖರ ಮಾಲಿಪಾಟೀಲ್ ಮೂಲತಃ ದಾನಿಗಳು. ಕರುಣಾಮಯಿ. ಶಿಕ್ಷಣವೇತ್ತರೂ ಬೇಸಾಯದಲ್ಲಿ ಆಸಕ್ತಿಯುಳ್ಳವರು. ಊರಿನ ಎಳಿಗೆಗಾಗಿ ಚಿಂತಿಸುವ ಮುತ್ಸದ್ಧಿ. ರಾಜಶೇಖರ ಮಾಲಿಪಾಟೀಲರ ಕುಟುಂಬ, ಮಕ್ಕಳು ಸಂಬಂಧಿಕರು ಹೀಗೆ ಒಡನಾಡಿಗಳನ್ನು ಸಂಪರ್ಕಿಸಿ, ಮಾಹಿತಿ ಸಂಗ್ರಹಿಸಿದ್ದು, ಕೆಲವು ಮಹತ್ವದ ಚಿತ್ರಗಳನ್ನೂ ಪ್ರಕಟಿಸಿದ್ದಾರೆ. ರಾಜಶೇಖರ ಮಾಲಿಪಾಟೀಲರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವಿದು.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books