ಸಾವಿತ್ರಿಬಾಯಿ ಫುಲೆ

Author : ಸರಜೂ ಕಾಟ್ಕರ್‌

₹ 150.00




Year of Publication: 2019
Published by: ಯಾಜಿ ಪ್ರಕಾಶನ
Address: ಯಾಜಿ ಪ್ರಕಾಶನ, ಉಮಾಮಹೇಶ್ವರ ಬಿಲ್ಡಿಂಗ್, ಸೀನಂಭಟ್ಟ ಕಚೇರಿ ಹತ್ತಿರ, ನಾಲ್ಕನೇ ವಾರ್ಡ್, ಪಟೇಲ ನಗರ, ಹೊಸಪೇಟೆ-583201, ಕರ್ನಾಟಕ
Phone: 7019637741, 94499 22800, 9481042400

Synopsys

ಲೇಖಕ ಸರಜೂ ಕಾಟ್ಕರ್‌ ಅವರ ಕಾದಂಬರಿ ಕೃತಿ ʻಸಾವಿತ್ರಿಬಾಯಿ ಫುಲೆʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಚಂದ್ರಕಾಂಡ ಪೋಕಳೆ ಅವರು ಕೃತಿಯ ಬಗ್ಗೆ, “ಚರಿತ್ರೆಯ ಸಾವಿತ್ರಿಬಾಯಿಗೂ ಸರಜೂ ಕಾಟ್ಕರ್ ರೂಪಿಸಿದ ಸಾವಿತ್ರಿಬಾಯಿಗೂ ಸಾಕಷ್ಟು ವ್ಯತ್ಯಾಸವಿದೆ. ಅದರರ್ಥ ಕಾಟ್ಕರ್ ಅವರು ಚರಿತ್ರೆಯನ್ನು ಹೊರತುಪಡಿಸಿ ಬರೆದಿದ್ದಾರೆಂದು ಭಾವಿಸಬೇಕಿಲ್ಲ. ಚರಿತ್ರೆಗೆ ಸೃಜನಶೀಲತೆಯ ಹೊಸರೂಪ ನೀಡುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಈ ಕೃತಿಯೊಂದು ಸೃಜನಶೀಲ ಕಲಾಕೃತಿಯಾಗಿ ಹೊರ ಹೊಮ್ಮುವುದು ಸಾಧ್ಯವಾಗಿದೆ. ಅಪ್ಪಟ ಚರಿತ್ರಾತ್ಮಕ ಕೃತಿಗಳು ಎಷ್ಟೋ ಸಲ ಪೇಲವವಾಗಿ ಬಿಡುವ ಅಪಾಯವಿರುತ್ತದೆ. ಅಂಥ ಆಸಾಯದಿಂದ ಕಾಟ್ಕರ್‌ ಅವರ 'ಸಾವಿತ್ರಿಬಾಯಿ' ಪಾರಾಗಿದ್ದೇ ಇವರ ಶಕ್ತಿಸ್ಥಾನ. ಚರಿತ್ರೆಯಲ್ಲಿರುವ ಸಾವಿತ್ರಿಬಾಯಿಗೆ ಸ್ವಂತ ವ್ಯಕ್ತಿತ್ವವಿಲ್ಲ. ಇಲ್ಲಿ ಅವಳಿಗೆ ಸ್ವಂತ ವ್ಯಕ್ತಿತ್ವವಿದೆ, ಸ್ವಂತ ಅಸ್ಮಿತೆಯೂ ಇದೆ. ಕಾದಂಬರಿ ಆರಂಭದಿಂದ ಕೊನೆಯವರೆಗೆ ಉಸಿರು ಬಿಗಿ ಹಿಡಿದು ಓದಿಸುವಂತೆ ಮಾಡುತ್ತದೆ. ಕಾಟ್ಕರ್‌ ಅವರು ಕಥನ ಕಲೆಗೆ ಎಲ್ಲೂ ಕುಂದು ಬರದ ರೀತಿಯಲ್ಲಿ ಕಥಾ ಶಿಲ್ಪವನ್ನು ಹೆಣೆದಿದ್ದಾರೆ. ಕಿಕ್ಕಿರಿದು ತುಂಬಿಕೊಂಡ ಪ್ರಸಂಗಗಳನ್ನು ನಾಟಕೀಯ ಸನ್ನಿವೇಶದ ನಿರ್ಮಾಣಕ್ಕೆ ಪೂರಕವಾಗಿ ದುಡಿಸಿಕೊಳ್ಳಲಾಗಿದೆ. ಬಂಧ ಎಲ್ಲೂ ಸಡಿಲವಾಗಿಲ್ಲ, ಸಂಭಾಷಣೆಯಲ್ಲಿ ಚುರುಕುತನವಿದೆ, ತಾರ್ಕಿಕತೆಯಿದೆ. ನಿರೂಪಣೆಯಲ್ಲಿ ಸಾಮಾಜಿಕ ಕಳಕಳಿಯಿದೆ” ಎಂದು ಹೇಳಿದ್ದಾರೆ.

About the Author

ಸರಜೂ ಕಾಟ್ಕರ್‌
(14 August 1953)

ವೃತ್ತಿಯಲ್ಲಿ ಪತ್ರಕರ್ತರು ಆಗಿರುವ ಕವಿ ಸರಜೂ ಕಾಟ್ಕರ್ ಅವರು ಜನಿಸಿದ್ದು (1953 ಆಗಸ್ಟ್‌ 14ರಂದು) ಹುಬ್ಬಳ್ಳಿಯಲ್ಲಿ . ತಂದೆ ಹಣಮಂತರಾವ್, ತಾಯಿ ಗೌರಾಬಾಯಿ.  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ (ಕನ್ನಡ) ಪದವೀಧರರು.ಕರ್ನಾಟಕ ವಿ.ವಿ.ಯಿಂದ ‘ಕನ್ನಡ-ಮರಾಠಿ ದಲಿತ ಸಾಹಿತ್ಯ: ಒಂದು ಅಧ್ಯಯನ’ ವಿಷಯವಾಗಿ (1994) ಪಿಎಚ್ ಡಿ ಪಡೆದರು. ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗದ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು ಸೇರಿದಂತೆ ಸರ್ಕಾರದ ಹಲವಾರು ಅಕಾಡೆಮಿ, ಸಮಿತಿ ಹೀಗೆ ವಿವಿಧ ಜವಾಬ್ದಾರಿತ ಸ್ಥಾನಗಳನ್ನು ನಿರ್ವಹಿಸಿದ್ದಾರೆ.  ಕೃತಿಗಳು: ಬೆಂಕಿ-ನೀರು, ಹಸಿದ ನೆಲ, ಸೂರ್ಯ, ...

READ MORE

Related Books