ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ ಯಶೋಗಾಥೆ

Author : ಜನಾರ್ದನರಾವ್ ಸಾಳಂಕೆ

Pages 257

₹ 300.00




Year of Publication: 2018
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: ಸುರೇಶ.ಬಿ.ಕೆ # 176,12ನೇಕ್ರಾಸ್, ಮಾಗಡಿ ಮುಖ್ಯ ರಸ್ತೆ ಅಗ್ರಹಾರ ದಾಸರಹಳ್ಳಿ, ಬೆಂಗಳೂರು -79 
Phone: 9880802551

Synopsys

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಯಶೋಗಾಥೆ-ಪತ್ರಕರ್ತ ಹಾಗೂ ಲೇಖಕ ಜನಾರ್ದನ ರಾವ್ ಸಾಳಂಕೆ ಅವರ ಕೃತಿ. ಕನ್ನಡ ಚಲನಚಿತ್ರ ವಲಯದಲ್ಲಿ ಡಾ. ಶಿವರಾಜಕುಮಾರ ಅವರದ್ದು ದೊಡ್ಡ ಹೆಸರು. ತಮ್ಮ ತಂದೆ ಡಾ. ರಾಜಕುಮಾರ ಅವರ ನಟನಾ ಕಲೆಯನ್ನು ನೋಡುತ್ತಾ, ಪ್ರಭಾವಿತರಾಗಿ ಹಂತಹಂತವಾಗಿ ಬೆಳೆಯುತ್ತಾ, ಇಂದು ಕನ್ನಡ ಚಲನಚಿತ್ರ ರಂಗಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಡಾ. ಶಿವರಾಜಕುಮಾರ್ ಅವರ ಬದುಕು-ಚಲನಚಿತ್ರರಂಗದ ಸಾಧನೆ, ನಟಿಸಿರುವ ಚಿತ್ರಗಳು, ಪಡೆದ ಪ್ರಶಸ್ತಿ-ಪುರಸ್ಕಾರಗಳು ಹೀಗೆ ಸಾಧನೆಗಳ ಹಿರಿಮೆಯನ್ನು ಈ ಕೃತಿಯಲ್ಲಿ ಕಾಣಿಸಲಾಗಿದೆ.

ಕೃತಿಗೆ ಬೆನ್ನುಡಿ ಬರೆದ ಹಿರಿಯ ಪೋಷಕ ನಟ ಹೊನ್ನವಳ್ಳಿ ಕೃಷ್ಣ ಅವರು ‘ನಮ್ಮ ಅಣ್ಣಾವ್ರ ಗುಣಗಳನ್ನೇ ನಮ್ಮ ಶಿವು ಮೈಗೂಡಿಸಿಕೊಂಡಿದ್ದಾರೆ. ಶಿವು ಅವರನ್ನು ನೋಡಿದಾಗೆಲ್ಲ ಅಣ್ಣಾವ್ರು ನೆನಪಾಗುತ್ತಾರೆ. ಪ್ರೀತಿ-ವಿಶ್ವಾಸಕ್ಕೆ ಬೆಲೆ ಕೊಡುವ ಗುಣ ದೊಡ್ಮನೆಗಿದೆ’ ಎಂದು ಡಾ. ರಾಜ್, ಡಾ. ಶಿವರಾಜಕುಮಾರ ಹಾಗೂ ಈ ಕೃತಿಯ ಕುರಿತು ಅಭಿಮಾನ ವ್ಯಕ್ತಪಡಿಸಿದ್ದಾರೆ. 

 

About the Author

ಜನಾರ್ದನರಾವ್ ಸಾಳಂಕೆ
(29 September 1971)

ಜನಾರ್ದನರಾವ್ ಸಾಳಂಕೆ ಅವರು ಪತ್ರಕರ್ತರು ಹಾಗೂ ಛಾಯಾಗ್ರಾಹಕರು. ಎಂ.ಎ (ಆರ್ಥಶಾಸ್ತ್ರ) ಹಾಗೂ ಎಂ.ಬಿ.ಎ (ಸಿಸ್ಟಮ್ಸ್) ಪದವೀಧರರು. ಬೆಂಗಳೂರಿನಲ್ಲಿಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದಾರೆ.  ಕೃತಿಗಳು: ಮರೆಯದ ಮಾಣಿಕ್ಯ (ಯಜಮಾನ ಡಾ.ವಿಷ್ಣುವರ್ಧನ್ ಅವರ ಚಿತ್ರಣ) ಸಿಂಹ ಘರ್ಜನೆ (ವಿಷ್ಣುವರ್ಧನ್ ತೀರಿಕೊಂಡ ಮೇಲೆ ನಡೆದ ಎರಡು ವರ್ಷಗಳ ಅವಧಿಯಲ್ಲಿಯ ಬೆಳವಣಿಗೆಗಳು), ಕರುಣಾಮಯಿ (ಡಾ.ವಿಷ್ಣುವರ್ಧನ್ ಅವರ ಕುಟುಂಬ, ಆಪ್ತರು, ಅಭಿಮಾನಿಗಳ ಸಂದರ್ಶನಗಳು), ನಾಗರಹಾವು (ವಿಷ್ಣುವರ್ಧನ್ ಅವರ ಪಾತ್ರದ ವಿಶ್ಲೇಷಣೆ) ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ ಯಶೋಗಾಥೆ.  ಪ್ರಶಸ್ತಿ-ಪುರಸ್ಕಾರಗಳು: ಡಾ.ವಿಷ್ಣುವರ್ಧನ್ ಅವರ ಮೇಲಿನ ನಾಲ್ಕೂ ಪುಸ್ತಕಗಳಿಗೆ ಬೆಂಗಳೂರಿನ ವೆಂಕಟಾಪುರದ ಡಾ.ವಿಷ್ಣು ಸೇನಾ ಸಮಿತಿ,  ಸನ್ ಸ್ಟಾರ್ ನಾಗರಹಾವು ಡಾ.ವಿಷ್ಣುವರ್ಧನ್ ಕ್ರೀಡಾ ಮತ್ತು ಸಾಂಸ್ಕೃತಕ ಟ್ರಸ್ಟ್ , ಕಮಲಾನಗರ. ಬಿನ್ನಿಪೇಟೆಯ ಸಾಮ್ರಾಟ್ ಟೀo, ಲಗ್ಗೆರೆ ...

READ MORE

Related Books