ಮೌನ ಯೋಗಿಯ ಮಹಾ ಶಕ್ತಿ

Author : ಸಂಗಮೇಶ ತಮ್ಮನಗೌಡ್ರ

Pages 56

₹ 25.00




Year of Publication: 2012
Published by: ಸಿದ್ದೇಶ್ವರ ಪ್ರಕಾಶನ
Address: ಹಳೆಯ ಸರಾಫ್ ಬಜಾರ್, ಶ್ರೀ ಜಗದಂಬಾ ದೇವಿ ದೇವಸ್ಥಾನ ಹತ್ತಿರ, ಗದಗ-01
Phone: 9242469965

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಬರೆದ ಪುಸ್ತಕ ಮೌನಯೋಗಿಯ ಮಹಾಶಕ್ತಿ. ಚಿಕೇನಕೊಪ್ಪದ ಶ್ರೀ ಚೆನ್ನವೀರ ಶರಣರ ನುಡಿ ಆಧರಿತ ಚಿತ್ರಣ ಇಲ್ಲಿದೆ. ಈ ಶರಣರು ಮಾತಿಗಿಂತ ಮೌನಕ್ಕೆ ಹೆಚ್ಚು ಮಹತ್ವ ಕೊಟ್ಟವರು. ಯಾವುದು ಯಾವಾಗಲೂ ಇರ್‍ತದ, ಇದ್ಹಂಗ ಇರ್‍ತದ, ಅದೇ ಪರಮವಸ್ತು, ಗುರುಬೋಧೆ ಎಂಬ ದೀಪ ಶಿಷ್ಯನ ಒಳ-ಹೊರಗಿನ ಕತ್ತಲೆಯನ್ನೆಲ್ಲ ಕಳೆಯಬಹುದು, ಅನನ್ಯವಾಗಿ ನಂಬಿದ ಭಕ್ತನಿಗೆ ದೇವರು ಎಂದೂ ಕೈಡಲಾರನು’ ಇಂತಹ ಬೋಧೆಗಳೊಂದಿಗೆ ಭಕ್ತರ ಮನದಲ್ಲಿ ಪೂಜ್ಯನೀಯವಾಗಿರುವ ಚಿಕೇನಕೊಪ್ಪದ ಚೆನ್ನವೀರ ಶರಣರ ಬಗ್ಗೆ ಸವಿವರವಾದ ಚಿತ್ರಣ ಇಲ್ಲಿದೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books