ಅಂತಃಕರಣದ ಪು.ತಿ.ನ

Author : ಎಚ್. ಎಸ್. ವೆಂಕಟೇಶಮೂರ್ತಿ

₹ 200.00




Year of Publication: 2022
Published by: ಪುತಿನ ಟ್ರಸ್ಟ್
Address: ಬೆಂಗಳೂರು

Synopsys

ಎಚ್. ಎಸ್. ವೆಂಕಟೇಶಮೂರ್ತಿ ಅವರು ಪುತಿನ ಅವರ ಜೀವನ ಹಾಗೂ ಸಾಹಿತ್ಯದ ಕುರಿತು ಬರೆದ ಸರ್ವಗ್ರಾಹಿ ಅಡಕ ಕೃತಿಯಾಗಿದೆ. ಲೇಖಕ ಚಿಂತಾಮಣಿ ಕೊಡ್ಲೆಕೆರೆ ಅವರು ಈ ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದು ಎಚ್.ಎಸ್.ವಿ ಅವರ ಈ ಕೃತಿ ತಡವಾಗಿಯಾದರೂ ಪ್ರಕಟವಾಗುತ್ತಿರುವುದು ಸಂತೋಷದ ಸಂಗತಿ. ವಿಮರ್ಶೆಯ ಬಿಗಿ ಪಟ್ಟುಗಳನ್ನು ಬದಿಗಿಟ್ಟ ರಸಪೂರ್ಣ ಪಟ್ಟಾಂಗದ ಬರವಣಿಗೆ ಇಲ್ಲಿದೆ. ’ಪುತಿನ ಗದ್ಯ ನೆಲಕ್ಕೆ ತಾಗುವುದು ಜಿಗಿಯುವುದಕ್ಕೆ ಮಾತ್ರ’ಎಂಬಮಥ ಅನಿರೀಕ್ಷಿತ ಮಾತುಗಳಿಂದ ಈ ಕೃತಿ ಪಡೆಯುವ ಜಿಗಿತ ಅಸಾಮಾನ್ಯ. ದರ್ಶನ ದೀಪ್ತ ಕವಿ ಪುತಿನ ಅವರಿಗೆ ಎಚ್.ಎಸ್.ವಿ ಹಚ್ಚಿದ ಒಲವಿನ ನೀಲಾಂಜನ ಈ ಅಂತಃಕರಣದ ಪುತಿನ ಎಂದಿದ್ದಾರೆ.

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books