ಲೇಖಕ ನ ದಾಮೋದರ ಶೆಟ್ಟಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದ ‘ಬಿ.ಕೆ.ಸುಮಿತ್ರ- 75’ ಕೃತಿಯು ಗಾಯಕ ಲೋಕದಲ್ಲಿ ಸಹಸ್ರಾರು ಕಲಾರಾಧಕರಿಗೆ ಕಲಾ ಸಂಸ್ಕಾರವನ್ನು ಧಾರೆ ಎರೆದ ಗಾನ ವಿಶಾರದೆ, ನಾಡೋಜ ಬಿ.ಕೆ.ಸುಮಿತ್ರ ಅವರ ಬಗೆಗಿನ ಕೃತಿ. ಲಕ್ಷ್ಮಣ ಕೊಡಸೆ ಹಾಗೂ ಸಂಧ್ಯಾ ಭಟ್ ಸಂಪಾದಕರಾಗಿ, ಶ್ರೀನಿವಾಸ್ ಜಿ.ಕಪ್ಪಣ್ನ, ವೆಂಕಟೇಶಮೂರ್ತಿ ಶಿರೂರ್ ಅವರ ಸಲಹೆಯೊಂದಿಗೆ ಈ ಕೃತಿ ನಿರ್ಮಾಣವಾಗಿದೆ. ಕಲಾಜಗತ್ತು ಕಾಣುವಷ್ಟು ಸುಂದರವಲ್ಲ; ಕೇಳುವಷ್ಟು ಮಧುರವಲ್ಲ. ಒಂದು ಮಟ್ಟ ಮುಟ್ಟಬೇಕಾದರೆ, ಹಾಡಿದ್ದು ಕೇಳುಗರ ಮನಸ್ಸನ್ನು ತಟ್ಟಬೇಕಾದರೆ, ಬೇಕಾದಷ್ಟು ಏರಿಳಿತಗಳನ್ನು ದಾಟಬೇಕಾಗುತ್ತದೆ. ಹಾಗೆ ದಾಟಿ ಏರಿಳಿತಗಳನ್ನು ಮೆಟ್ಟಿ ನಿಂತ ಕನ್ನಡದ ಮಹಾನ್ ಪ್ರತಿಭೆ ಅಂದರೆ ಅದು ಬಿ.ಕೆ.ಸುಮಿತ್ರ ಎಂಬುದಾಗಿ ಕಲಾವಿದ ಎಸ್. ಶಿವರಾಂ ಕೃತಿಯ ಮುನ್ನಡಿಯಲ್ಲಿ ಬರೆದಿದ್ದಾರೆ. ಕೃತಿಯ ಎರಡನೆಯ ಉತ್ತರರಂಗದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯ, ಬಿವಿ ಶ್ರೀನಿವಾಸ್ , ರತ್ನಮಾಲಾ ಪ್ರಕಾಶ್, ಶಿವಮೊಗ್ಗ ಸುಬ್ಬಣ್ಣ, ಉಪಾಸನಾ ಮೋಹನ್, ಶಶಿಧರ ಕೋಟೆ, ನಾಗತ್ತಿಹಳ್ಳಿ ಚಂದ್ರಶೇಖರ್, ದೊಡ್ಡರಂಗೇಗೌಡ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಬಿ.ಆರ್. ಲಕ್ಷ್ಮಣ ರಾವ್ ಸೇರಿದಂತೆ ಅನೇಕ ಹಿರಿಯ ಗಾಯಕ, ಗಾಯಕಿಯರು, ಲೇಖಕರು, ಕವಿ, ಸಾಹಿತಿಗಳು ಬಿ.ಕೆ.ಸುಮಿತ್ರ ಅವರ ಬಗೆಗೆ ತಮ್ಮ ಮಾತುಗಳನ್ನು ಬರಹದ ರೂಪದಲ್ಲಿ ಈ ಪುಸ್ತಕದಲ್ಲಿ ನೀಡಿದ್ದಾರೆ. ಕೃತಿಯ ಮೂರನೆಯ ಉತ್ತರರಂಗದಲ್ಲಿ ಕುಟುಂಬ ಪುರಾಣೆ ಎಂಬ ಭಾಗವನ್ನು ಹೊಂದಿದ್ದು, ಬಿ.ಕೆ.ಸುಮಿತ್ರ ಅವರ ಪತಿ ಸುಧಾಕರ್, ಮಗ-ಮಗಳು, ತಂಗಿ ಹೀಗೆ ಕುಟುಂಬದ ಅನೇಕ ಸದಸ್ಯರು ಸುಮಿತ್ರ ಅವರ ಬಗ್ಗೆ ಬರೆದಿದ್ದಾರೆ..
ನಾದಾ ಎಂತಲೂ ಕರೆಯಲಾಗುವ ನಾ. ದಾಮೋದರ ಶೆಟ್ಟಿ ಅವರು 1951 ಆಗಸ್ಟ್ 2ರಂದು ಕಾಸರಗೋಡಿನ ಕುಂಬಳೆಯಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸುಳುವಿನೊಳಗೆ, ಸರದಿ (ಕಾದಂಬರಿ), ಕೆ.ಎನ್. ಟೇಲರ್, ಮುದ್ದಣ ಬದುಕು-ಬರಹ, ನಾರಾಯಣಗುರು, ಪೇಜಾವರ ಸದಾಶಿವರಾಯರು, ಕೆ.ವಿ. ಸುಬ್ಬಣ್ಣ (ವ್ಯಕ್ತಿ ಪರಿಚಯ), ಭತ್ತದ ಕಾಳುಗಳು, ಕರಿಯ ದೇವರ ಹುಡುಕಿ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಸಾಕ್ಷಾತ್ಕಾರ, ಮಹಾಕವಿ ಜಿ. ಶಂಕರ ಕುರುಪ್, ಭರತವಾಕ್ಯ (ಅನುವಾದ), ಅದ್ಭುತ ರಾಮಾಯಣ, ಸ್ವಾತಂತ್ರದ ಸ್ವರ್ಣಹೆಜ್ಜೆ, ಸಾನ್ನಿಧ್ಯ, ಪೋಲಿ, ...
READ MORE