ಬದುಕಿಗೊಂದು ಭರವಸೆ

Author : ರಂಗಸ್ವಾಮಿ ಮೂಕನಹಳ್ಳಿ

Pages 184

₹ 200.00




Year of Publication: 2022
Published by: ಸಾವಣ್ಣ ಬುಕ್ಸ್
Address: ಬೈರಸಾಂದ್ರ ಮುಖ್ಯ ರಸ್ತೆ, ಜಯನಗರ, ಬೆಂಗಳೂರು 560022

Synopsys

ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ ಲೇಖನ ಕೃತಿ ʻಬದುಕಿಗೊಂದು ಭರವಸೆʼ. ಪುಸ್ತಕವು 75 ಸಾಧಕರ ವಿಶಿಷ್ಟವಾದ ಕತೆಗಳನ್ನು ಹೇಳುತ್ತದೆ. ಈ ಕತೆಗಳು ಓದುಗನನ್ನು ಪ್ರೇರೇಪಿಸಬಲ್ಲವುಗಳಾಗಿವೆ. ಇಲ್ಲಿರುವ ಒಬ್ಬೊಬ್ಬರದೂ ಬೆರಗಾಗಿಸುವಂತಹ, ಬದುಕಿಬಂದ ಹಾದಿಗಳಾಗಿವೆ. ಅವುಗಳನ್ನು ಓದುತ್ತಾ ಹೋದಂತೆ ನಾಮ್ಮ ಸಾಧನೆಯ ಮೇಲೆ ನಮ್ಮನ್ನು ಸಮಾಜ ಅಳೆಯುವ ರೀತಿಯನ್ನು ಕಾಣಬಹುದು. ಹಾಗಾಗಿ ಈ ಪುಸ್ತಕವು ನಾವು ಯಾರು ಎನ್ನುವುದರ ಆಧಾರದ ಮೇಲೆ ಸ್ವತಃ ನಮ್ಮನ್ನು ನಾವು ಅಳೆಯಬೇಕು, ಆಗ ಮಾತ್ರ ನಮ್ಮ ಗುರಿಯನ್ನು ಅನಾಯಾಸವಾಗಿ ಮುಟ್ಟಲು ಸಾಧ್ಯ ಎಂಬುದನ್ನು ನಮಗೆ ಅರ್ಥಮಾಡಿಸುತ್ತದೆ.

About the Author

ರಂಗಸ್ವಾಮಿ ಮೂಕನಹಳ್ಳಿ

ರಂಗಸ್ವಾಮಿ ಮೂಕನಹಳ್ಳಿ ಅವರು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇರುವ ಗ್ರಾಹಕರಿಗೆ ಹಣ ಹೂಡಿಕೆಯ ತಜ್ಞ. ಸಲಹೆಗಾರರಾಗಿ ವೃತ್ತಿ ನಿರತರು. ಹಲವಾರು ಉದ್ಯಮಗಳಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಹಲವು ಪ್ರಮುಖ ಪತ್ರಿಕೆ ನಿಯತಕಾಲಿಕೆಗಳಲ್ಲಿ ಹಣಕಾಸು ವಿಷಯಗಳ ಬಗ್ಗೆ ತ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತ ಬಂದಿದ್ದಾರೆ. ಕನ್ನಡ ಮತ್ತು ಸ್ಪಾನಿಷ್ ಭಾಷೆಯ ಸಮಾನಾಂತರ ಗಾದೆಗಳನ್ನು ಗುರುತಿಸಿ ಕೃತಿಯನ್ನು ರಚಿಸಿದ್ದು, ಇದು ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. ಹಣಕಾಸಿಗೆ ಸಂಬಂಧಿಸಿದ ಮೂರು ಅಂಕಣ ಗುಚ್ಛಗಳ ಕೃತಿಗಳು ಸಹ ಪ್ರಕಟಗೊಂಡಿವೆ. ‘ಬದುಕಿಗೊಂದು ಆಶಾಭಾವ, ವಿತ್ತ ಜಗತ್ತು ತಿಳಿಯಬೇಕಾದ ವಿಷಯ ಹಲವು ಹತ್ತು’ ಅವರ ...

READ MORE

Related Books