ವಿಶ್ವ ಕಂಡ ಶ್ರೇಷ್ಠ ಆರ್ಥಿಕ ಚಿಂತಕ

Author : ಎಚ್.ಎಸ್. ಬೇನಾಳ

Pages 130

₹ 110.00




Year of Publication: 2017
Published by: ಸಹನಾ ಪ್ರಕಾಶನ
Address: ಪ್ಲಾಟ್‌ ನಂ. 408, ಸಿ.ಐ.ಬಿ ಕಾಲೋನಿ, ಕೇಂದ್ರ ಬಸ್‌ ನಿಲ್ದಾಣದ ಹಿಂದುಗಡೆ, ಎಂಎಸ್.ಕೆ. ಮಿಲ್‌ ರಸ್ತೆ, ಗುಲಬರ್ಗಾ-585103
Phone: 9901177823

Synopsys

ಗ್ರಾಮೀಣ ಅರ್ಥವ್ಯವಸ್ಥೆಯ ಪ್ರಾಬಲ್ಯ, ಬಡತನ, ಕೃಷಿ ಜೀವನ, ಕೃಷಿ ಕಾರ್ಮಿಕರ ಮತ್ತು ಚಿಕ್ಕ ಹಿಡುವಳಿದಾರ ಸಮಸ್ಯೆಗಳು, ಕೌಶಲ್ಯದ ಕೊರತೆಗಳು ನೀಗಬೇಕಾದರೆ ಭಾರತದ ಸಾಮಾಜಿಕ-ಆರ್ಥಿಕ ಜೀವನ ಶೈಲಿಯು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಇಲ್ಲಿ ಲೇಖಕರು ವಿಚಾರ ಮಂಥನ ಮಾಡಿದ್ದಾರೆ. 

ಒಂದೆಡೆ ಸಾಂಪ್ರದಾಯಿಕ- ಸಾಮಾಜಿಕ-ಆರ್ಥಿಕ ಜೀವನದ ಪ್ರಭಾವ ಹಾಗೂ ಇನ್ನೊಂದೆಡೆ ಆಧುನಿಕತೆಯ ಭರಾಟೆ ಇವುಗಳ ಮಧ್ಯೆ ಭಾರತೀಯ ಪ್ರಜೆ ಗೊಂದಲಗಳ ಗೂಡಿನಲ್ಲಿ ಬದುಕುತ್ತಿದ್ದಾನೆ ಎಂಬುದರ ಹಿನ್ನಲೆಯಲ್ಲಿ ಎಚ್.ಎಸ್. ಬೇನಾಳರು ವಿಮರ್ಶಿಸಿರುವ ಬಾಬಾ ಸಾಹೇಬ್ ಡಾ. ಬಿ. ಆರ್.ಅಂಬೇಡ್ಕರ ಅವರ ಆರ್ಥಿಕ ಚಿಂತನೆಗಳನ್ನು ಮನಗಾಣಬಹುದಾಗಿದೆ.

About the Author

ಎಚ್.ಎಸ್. ಬೇನಾಳ

ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...

READ MORE

Related Books