ನೆಲದೊಡಲ ಚಿಗುರು

Author : ಎನ್.ಎಲ್. ಆನಂದ

Pages 168

₹ 171.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಡಾ. ಎಲ್. ನಾರಾಯಣ ರೆಡ್ಡಿ ಅವರ ಬದುಕು-ಚಿಂತನೆಗಳತ್ತ ವಿಷಯ ಕೇಂದ್ರೀಕೃತ ಕೃತಿ ‘ನೆಲದೊಡಲ ಚಿಗುರು. ಡಾ. ಎನ್.ಎಲ್. ಆನಂದ ಹಾಗೂ ಗುಂಡಪ್ಪ ದೇವೀಕೇರಿ ಅವರು ರಚಿಸಿದ್ದಾರೆ. ಡಾ. ಎಲ್. ನಾರಾಯಣ ರೆಡ್ಡಿ ಅವರು ನಾಡೋಜ ಪುರಸ್ಕೃತರು.ಅವರು ತಮ್ಮ ಬದುಕಿನ ಬಹುಭಾಗವನ್ನು ಕೃಷಿನಿರತರಾಗೇ ಕಳೆದರು. ಈ ಕೃತಿಗೆ ‘ಸಿದ್ದವನಹಳ್ಳಿ ಕೃಷ್ಣಶರ್ಮ ಸ್ಮಾರಕ ಸಾಹಿತ್ಯ ಪ್ರಶಸ್ತಿ’ (2013) ಲಭಿಸಿದೆ.

About the Author

ಎನ್.ಎಲ್. ಆನಂದ

ಲೇಖಕ ಆನಂದ ಎನ್.ಎಲ್ ಅವರು ಪರಿಸರಕ್ಕೆ ಸಂಬಂಧಿಸಿದ ಸ್ವಯಂ ಸೇವಾ ಸಂಘಟನೆ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಾ ಸಾಹಿತ್ಯಕ ಚಟುವಟಿಕೆಗಳಲ್ಲಿ ಆಸಕ್ತರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ಸ್ನಾತಕೋತ್ತರ ಪದವೀಧರರು. ಅನಂತಪುರದ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವೀಧರರು. ಜಯಪ್ರಕಾಶ ನಾರಾಯಣ, ಆಚಾರ್ಯ ವಿನೋಭಾ ಬಾವೆ, ಎಲ್. ನಾರಾಯಣರೆಡ್ಡಿ, ಸುಂದರಲಾಲ್ ಬಹುಗುಣ, ಬಾಬಾ ಆಮಟೆ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.  ...

READ MORE

Related Books