ಶ್ರದ್ಧಾಂಜಲಿ

Author : ಸಿದ್ದವನಹಳ್ಳಿ ಕೃಷ್ಣಶರ್ಮ

Pages 58




Year of Publication: 1950
Published by: ಸಿದ್ಧವನಹಳ್ಳಿ ಕೃಷ್ಣಶರ್ಮ
Address: ಬೆಂಗಳೂರು

Synopsys

ಮಹಾತ್ಮ ಗಾಂಧೀಜಿ ಜೀವನ ಚರಿತ್ರೆ ಕೆರಳಿದಷ್ಟೇ ಕುತೂಹಲವು ಅವರ ಪತ್ನಿ ಕಸ್ತೂರ ಬಾ ಅವರ ಜೀವನ ಚರಿತ್ರೆಯೂ ಒಳಗೊಂಡಿದೆ. ಕಸ್ತೂರ ಬಾ ಅವರ ಸಹಾಯವಿಲ್ಲದಿದ್ದರೆ ಗಾಂಧೀಜಿ ಮಹಾತ್ಮನಾಗಲು ಅಸಾಧ್ಯವಿತ್ತು. ಸ್ವತಃ ಗಾಂಧೀಜಿ ಅವರೇ ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ. ಕಸ್ತೂರ ಬಾ ವ್ಯಕ್ತಿತ್ವ ಕುರಿತು ಅಲ್ಲಲ್ಲಿ ಚದುರಿದಂತೆ ಸಾಹಿತ್ಯ ಸಿಗುತ್ತದೆ. ಆದರೆ. ಇಡೀಯಾಗಿ ದೊರಕದು. ಆ ಕೊರತೆಯನ್ನು ಈ ಕೃತಿ  ‘ಶ್ರದ್ಧಾಂಜಲಿ’ ನೀಗಿಸಿದೆ.

ಲೇಖಕ ಸಿದ್ಧವನಹಳ್ಳಿ ಕೃಷ್ಣಶರ್ಮರು ಕಸ್ತೂರ ಬಾ ಅವರ ಜನನ, ಮದುವೆ, ಮೊದಲನೇ ಮಗು ಹುಟ್ಟಿದ ಮೂರ್ನಾಲ್ಕು ದಿನದಲ್ಲೇ ತೀರಿ ಹೋಗಿದ್ದು, ಗಾಂಧೀಜಿ ಒಂಟಿಯಾಗೇ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದು, ಗಾಂಧೀಜಿಗೆ ಬ್ರಹ್ಮಚರ್ಯದ ಸ್ಫೂರ್ತಿ, ಸ್ವಾತಂತ್ಯ್ರ ಚಳವಳಿ, ಕಸ್ತೂರ ಬಾ ಜೈಲಿಗೆ ಹೋದದ್ದು, ಕಡೆಯ ದಸ್ತಗಿರಿ, ಮರಣ ಹೀಗೆ ‘ಬಾ’ ಅವರ ಜೀವನ ವೃತ್ತಾಂತವನ್ನು ಸವಿವರವಾಗಿ ಬರೆದಿದ್ದಾರೆ. ಗಾಂಧೀಜಿ ಒಬ್ಬ ಮಹಾತ್ಮನಾಗಿದ್ದು ಅವರ ವ್ಯಕ್ತಿಗತ ಸಾಧನೆಯಲ್ಲ; ಅದು ಕಸ್ತೂರ ಬಾ ಅವರ ಸಂಪೂರ್ಣ ತ್ಯಾಗಮಯ ಜೀವನವೂ ಕಾರಣ ಎಂಬುದು ಸಾಬೀತುಪಡಿಸುವಂತೆ ಕೃತಿಯು ಪರಿಣಾಮಕಾರಿಯಾಗಿದೆ.

About the Author

ಸಿದ್ದವನಹಳ್ಳಿ ಕೃಷ್ಣಶರ್ಮ
(31 July 1904 - 02 October 1973)

ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ, ಗಾಂಧೀವಾದಿ ಸಿದ್ದವನಹಳ್ಳಿ ಕೃಷ್ಣಶರ್ಮ ಚಿತ್ರದುರ್ಗ ಜಿಲ್ಲೆಯ ಸಿದ್ದವನಹಳ್ಳಿಯವರು. ಅವರು 1904 ಜುಲೈ 31ರಂದು ಜನಿಸಿದರು. ಚಿತ್ರದುರ್ಗ, ಮೈಸೂರುಗಳಲ್ಲಿ ಪ್ರಥಮ ಬಿ. ಎ. ತರಗತಿವರೆಗೆ ಓದಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಭಾವಕ್ಕೆ ಒಳಗಾಗಿ ಓದನ್ನು ಬಿಟ್ಟು ದೇಶ ಸೇವೆಗೆ ದುಮುಕಿದರು. ಜೊತೆಗೆ ಪತ್ರಿಕೋದ್ಯಮ, ಬರೆವಣಿಗೆ ಕೆಲಸವನ್ನೂ ನಡೆಸಿದರು. 1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಶಿಕ್ಷೆಗೆ ಒಳಗಾಗಿದ್ದರು. ಕನ್ನಡ ಪತ್ರಿಕೋದ್ಯಮದ ಏಳ್ಗೆಗೆ ಶ್ರಮಿಸಿದವರಲ್ಲಿ ಸಿದ್ಧವನಹಳ್ಳಿ ಪ್ರಮುಖರು. ಕನ್ನಡದಲ್ಲಿ ’ಹರಿಜನ’ ಪತ್ರಿಕೆ ಪ್ರಕಟಿಸಿದ ಅವರು ’ವಿಶ್ವ ಕರ್ನಾಟಕ’ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿದ್ದರು. ಆ ಪತ್ರಿಕೆಯಲ್ಲಿ ...

READ MORE

Related Books