ಕುಮಾರವ್ಯಾಸ

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 102

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಕುಮಾರವ್ಯಾಸ' ಈ  ಕವಿಯ ಜೀವನಗಾಥೆಯ ಪುಸ್ತಕವಿದು. ಕವಿ ದ.ರಾ. ಬೇಂದ್ರೆ ಅವರು ರಚಿಸಿದ್ದಾರೆ. ಕನ್ನಡದ ಮಹಾ ಕವಿ. ಮಹಾಭಾರತವನ್ನು ಶ್ರೀ ಕೃಷ್ಣ ಕಥೆಯನ್ನಾಗಿ ಷಟ್ಪದಿಯಲ್ಲಿ ರಚಿಸಿದ್ದಾನೆ-ಕುಮಾರವ್ಯಾಸ. ಇವನ ಪಾತ್ರಗಳು ಜೀವಂತ. ಇವನು ರೂಪಕ ಚಕ್ರವರ್ತಿ, ಭಾಷೆಯ ಪ್ರಭು. ಜಗತ್ತಿನಲ್ಲಿ ಒಳ್ಳೆಯತನ ದುಷ್ಟತನಗಳಿಗೆ ನಿರಂತರವಾಗಿ ನಡೆಯುವ ಹೊರಾಟದ ಸಾಂಕೇತಿಕ ಕಾವ್ಯ, ದೈವ ಬೆಂಬಲದ ಮಹತ್ವದ ನಿರೂಪಣೆ ಕುಮಾರವ್ಯಾಸ ಭಾರತ ಎಂದು ಪುಸ್ತಕದ ಕುರಿತಾಗಿ ವಿವರಿಸಲಾಗಿದೆ.ಕುಮಾರವ್ಯಾಸನು ಕೃತಿಗಳನ್ನ ರಚಿಸಿದ ಪರಿ, ಆತನ ಭಾಷಾ ಜಗತ್ತು ಮುಂತಾದ ಅನೇಕ ವಿಷಯಗಳನ್ನು ಈ ಕೃತಿಯಲ್ಲಿ ಬೇಂದ್ರೆಯವರು ಸರಳ ಕನ್ನಡದಲ್ಲಿ ಚಿತ್ರಿಸಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books