ಉದ್ದಾನೇಶ ಚರಿತೆ

Author : ಚನ್ನಪ್ಪ ಎರೇಸೀಮೆ

Pages 458

₹ 75.00




Year of Publication: 1993
Published by: ಗೌರಮ್ಮ ವಿದ್ಯಾರ್ಥಿ ನಿಲಯ
Address: ಹಳೆಯ ತಾಲೂಕು ಕಚೇರಿ ರಸ್ತೆ, ಚಿಕ್ಕಪೇಟೆ, ಬೆಂಗಳೂರು-560056

Synopsys

ಉದ್ದಾನೇಶ ಚರಿತೆ-ಈ ಕೃತಿಯ ಕರ್ತೃ-ಪಂಡಿತ ಚನ್ನಪ್ಪ ಎರೇಸೀಮೆ. ಉದ್ದಾನೇಶರ ಮೂಲ ಹೆಸರು ರುದ್ರಪ್ಪ. ಅವರು ಹಳ್ಳಿಯಲ್ಲಿ ಕುರಿ ಮೇಕೆಗಳನ್ನು ಮೇಯಿಸುತ್ತಿದ್ದರು. ಇರುವೆ ಗೂಡುಗಳಿಗೆ ಸಕ್ಕರೆ ಹಾಕುವ ಕಾಯಕ. ಈ ಸಕ್ಕರೆ ಹಾಗೂ ಪೂಜೆಯ ಪರಿಕರಗಳಿಗೆ ಹಣದ ಅಗತ್ಯ ಇದ್ದರಿಂದ ರುದ್ರಪ್ಪನು ಮೇಕೆಯನ್ನು ಮಾರಿದ್ದ. ಇದರಿಂದ, ಒದೆ ತಿನ್ನಬೇಕಾಯಿತು. ಆದರೆ, ಈ ಹೊಡೆತದಿಂದಲೇ ಆತನಿಗೆ ಜ್ಞಾನೋದಯವಾಯಿತು. ಅವರು ತಮ್ಮಿಚ್ಛೆಯಂತೆ ಹೊಡೆಯಲಿಲ್ಲ. ಆದರೆ, ಅದು ಶಿವ ಡಂಗುರವಾಗಿತ್ತು’ ಎಂದು ತಿಳಿದ. ಆ ದಿನವೇ ಆತ, ಮನೆಯ ಋಣ ತೊರೆದ. ಊರಿನ ಹಂಗು ತೊರೆದ. ತುಮಕೂರಿನ ಸಿದ್ಧಗಂಗೆಯತ್ತ ನಡೆದ..ಹೀಗೆ..ರುದ್ರಪ್ಪ ಉದ್ದಾನೇಶ ಆಗಿ ಪರಿವರ್ತನೆಗೊಂಡ ಪರಿ. ನಂತರ ಅಟವೀಶ ಸ್ವಾಮೀಜಿ ಅವರನ್ನು ಭೇಟಿಯಾಗಿದ್ದು, ಅವರಿಗೆ ಯೌಗಿಕ ದೃಷ್ಟಿ ಬಂದಿದ್ದು ..ಹೀಗೆ ಸಮಗ್ರ ಚಿತ್ರಣ ನೀಡುವ ಕೃತಿ ಇದು.

About the Author

ಚನ್ನಪ್ಪ ಎರೇಸೀಮೆ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...

READ MORE

Related Books