ವಿರೂಪಾಕ್ಷಪ್ಪಗೌಡ

Author : ಪ್ರಭುಲಿಂಗ ನೀಲೂರೆ

Pages 100

₹ 60.00




Year of Publication: 2016
Published by: ಪ್ರಸಾರಾಂಗ
Address: ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ

Synopsys

ಲೇಖಕ ಪ್ರಭುಲಿಂಗ ನೀಲೂರೆ ಅವರ ಕೃತಿ-ವಿರೂಪಾಕ್ಷಪ್ಪ ಗೌಡ. ಹೈದ್ರಾಬಾದ್ ಕರ್ನಾಟಕ ಪ್ರದೇಶವು ಕನ್ನಡ ನಾಡಿನಲ್ಲಿಯೇ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷಿಕ ನೆಲೆಯಲ್ಲಿ ತನ್ನದೇ ಆದ ವೈಶಿಷ್ಠ್ಯತೆಯನ್ನು ಹೊಂದಿದೆ. ದೇಶಕ್ಕೆ 1947ರ ಆಗಷ್ಟ 15ರಂದು ಸ್ವಾತಂತ್ರ್ಯ ಲಭಿಸಿದರೂ ಈ ಪ್ರದೇಶದ ವಿಮೋಚನೆಯು ಒಂದು ವರ್ಷ ಒಂದು ತಿಂಗಳು ತಡವಾಗಿ ಆಯಿತು. ಈ ಭಾಗದ ವಿಮೋಚನೆಗಾಗಿ ಹೋರಾಡಿದ ಅಪ್ರತಿಮ ವೀರರಲ್ಲಿ ಯಾದಗಿರಿ ತಾಲೂಕಿನ ಸುರಪುರ ತಾಲೂಕಿನ ರಾಜನಕೊಳೂರಿನ ವಿರುಪಾಕ್ಷಪ್ಪಗೌಡ ಪ್ರಮುಖರು. ಅವರ ಜೀವನಚರಿತ್ರೆ, ವಿಮೋಚನಾ ಹೋರಾಟದ ಇತಿಹಾಸವನ್ನು ಕೃತಿಯಲ್ಲಿ ದಾಖಲಿಸಿದೆ.

ಬ್ರಿಟಿಷ್ ಇಂಡಿಯಾ ಮತ್ತು ಸಂಸ್ಥಾನಿಕ ಇಂಡಿಯಾ ಸ್ವತಂತ್ರವಾದರೂ ಹೈದ್ರಾಬಾದ್ ಸಂಸ್ಥಾನದ ನಿಜಾಮ್ ಮಾತ್ರ 1947, ಆಗಷ್ಟ 15ರ ನಂತರವೂ ಭಾರತದ ಒಕ್ಕೂಟಕ್ಕೆ ಸೇರಲು ಸುತಾರಾಂ ಒಪ್ಪಿರಲಿಲ್ಲ. ಸಂಸ್ಥಾನ ಉಳಿಸಿಕೊಳ್ಳಲು ಅಡ್ಡ ದಾರಿ ಹಿಡಿದ ಪರಿಣಾಮ, ರಜಾಕರರ ಪಡೆ ಇವರೊಂದಿಗೆ ಕೈಜೋಡಿಸಿ ಅನೇಕ ದೊಂಬಿ, ಅತ್ಯಾಚಾರಗಳಿಗೆ ಪ್ರೋತ್ಸಾಹಿಸಿ ಜನಸಾಮಾನ್ಯರ ಆಕ್ರೋಶಕ್ಕೂ ಕಾರಣವಾಯಿತು. ಈ ವೇಳೆ, ಹೈ-ಕ ವಿಮೋಚನೆಗಾಗಿ ಕೇವಲ 23ನೇ ವಯಸ್ಸಿನಲ್ಲೇ ಹುತಾತ್ಮರಾದ ಅಪ್ರತಿಮ ಶೂರ ವಿರುಪಾಕ್ಷಪ್ಪಗೌಡರ ರೋಚಕ ಕಥಾನಕ, ಶೌರ್ಯ, ರಜಾಕರರ ಪಡೆಗೆ ಸಿಂಹಸ್ವಪ್ನವಾಗಿ ಕಾಡಿದ್ದ ಸಮಗ್ರ ಮಾಹಿತಿ ಈ ಕೃತಿಯಲ್ಲಿದೆ.

About the Author

ಪ್ರಭುಲಿಂಗ ನೀಲೂರೆ
(22 July 1974)

ಲೇಖಕ ಹಾಗೂ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರು ಮೂಲತಃ  ಕಲಬುರಗಿ ಜಿಲ್ಲೆಯ  ಆಳಂದ ತಾಲೂಕಿನ ಹಳ್ಳಿಸಲಗರ ಗ್ರಾಮದವರು. ಬಿ.ಎಸ್.ಸಿ. ಪದವೀಧರರು. ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಮುಖ್ಯ ಉಪ ಸಂಪಾದಕರು. 1990ರಲ್ಲಿ ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಆರಂಭಿಸಿದ್ದಾರೆ. ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗದ ರಚನೆಕಾರ ಶ್ರೀವಿಜಯನ ಹೆಸರಲ್ಲಿ ರಾಜ್ಯಮಟ್ಟದ ಸಾಹಿತ್ಯಕ ಪ್ರಶಸ್ತಿ ಆರಂಭಿಸಿ, ಸರಕಾರ ಆ ಪ್ರಶಸ್ತಿ ಘೋಷಣೆ ಮಾಡುವವರೆಗೂ ಸಂಸ್ಥೆ ಮೂಲಕ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಬಿಸಿಲನಾಡು ಪ್ರಕಾಶನ ಸಂಸ್ಥೆಯೂ ನಡೆಸುತ್ತಿದ್ದಾರೆ. ಕೃತಿಗಳು: ಅಜ್ಜ ಹೇಳಿದ ಕಲ್ಯಾಣಕ್ರಾಂತಿ ಕಥೆ (ಮಕ್ಕಳ ಕಥನ)  ಹುಕುಂಪತ್ರ (ಐತಿಹಾಸಿಕ ನಾಟಕ) -ತತ್ವಪದಕಾರ ಚನ್ನೂರ ...

READ MORE

Related Books