ಕಮಲಾಪುರದ ಜಾನಪದ ಕವಿ ಮಲ್ಲಿಕಾರ್ಜುನ ತ್ರಿಮುಖೆ

Author : ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ

Pages 96

₹ 75.00




Year of Publication: 2010
Published by: ಕಶೆಟ್ಟಿ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ರಚಿಸಿದ ಕೃತಿ-`ಕಮಲಾಪುರ ಜನಪದ ಕವಿ ಮಲ್ಲಿಕಾರ್ಜುನ ತ್ರಿಮುಖೆ ’ ಜನಪದ ಕಲಾವಿದರ ಜೀವನಚರಿತ್ರೆಯನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಮುಖ್ಯವಾಗಿ ಅವರ ಜನನ ಮತ್ತು ಬಾಲ್ಯ,, 46ರ ಹರೆಯದಲ್ಲಿ ಪದರಚನೆಯ ಆರಂಭ, ಅಕ್ಷರ ಜ್ಞಾನವಿಲ್ಲದ ಕವಿಯ ಅನುಭವ ಸಂಪತ್ತು, ಕವಿಯ ಹೆಮ್ಮೆಯ ನುಡಿಗಳು, ಮಲ್ಲಿಕಾರ್ಜುನ ತ್ರಿಮುಖೆ ಹಾಗೂ ಹಾಡುಗಾರರ ಸ್ನೇಹ ಸಂಬಂಧ, ತ್ರಿಮುಖೆ ಅವರ ಕೊನೆಯ ದಿನಗಳು ಹೀಗೆ ವಿವಿಧ ಅಧ್‌ಐಆಯಗಳನ್ನು ಒಳಗೊಂಡಿದೆ. ತ್ರಿಮುಖೆ ಅವರು ರಚಿಸಿರುವ ಹಲವಾರು ಜನಪದ ಗೀತೆಗಳನ್ನು ಒಂದೆಡೆ ಸಂಗ್ರಹಿಸಿ ನೀಡಲಾಗಿದೆ.

About the Author

ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ
(04 July 1948)

ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು.  ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...

READ MORE

Related Books