ಭಾರತೀಯ ಸಾಹಿತ್ಯ ನಿರ್ಮಾಪಕರು ಕನಕದಾಸ

Author : ಟಿ.ಎನ್. ನಾಗರತ್ನ

₹ 25.00




Year of Publication: 2000
Published by: ಸಾಹಿತ್ಯ ಅಕಾದೆಮಿ
Address: ರವೀಂದ್ರ ಭವನ, ಫಿರೋಜ್ ಶಹಾ ರಸ್ತೆ, ಸನದೆಹಲಿ- 110 001

Synopsys

ಟಿ.ಎನ್.ನಾಗರತ್ನ ಅವರು ಕನಕದಾಸರ ಜೀವನ ಚರಿತ್ರೆ `ಭಾರತೀಯ ಸಾಹಿತ್ಯ ನಿರ್ಮಾಪಕರು ಕನಕದಾಸ’. ಕನಕದಾಸರು ಮಧ್ಯಕಾಲೀನ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯನ್ನಿತ್ತ ದಾಸಶ್ರೇಷ್ಠರಲ್ಲೊಬ್ಬರು. ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಕನಕದಾಸರು. ಇತರೆ ಹರಿದಾಸರಿಗಿಂತ ಭಿನ್ನವಾಗಿ ಕವಿಯಾಗಿ, ಹರಿಭಕ್ತಿಸಾರ, ಮೋಹನ ತರಂಗಿಣಿ ಮತ್ತು ರಾಮಧಾನ್ಯ ಚರಿತ್ರೆಯಂತಹ ವಿಶಿಷ್ಟ ಕಾವ್ಯಕೃತಿಗಳನ್ನು ರಚಿಸಿದ ಹಿರಿಮೆ ಕನಕದಾಸರಿಗೆ ಸಲ್ಲುತ್ತದೆ. ಕನಕದಾಸರ ವಿಶಿಷ್ಟ ವ್ಯಕ್ತಿತ್ವ ಹಾಗೂ ಅಪೂರ್ವ ಕೃತಿರಚನೆಯನ್ನು ಸಮರ್ಥವಾಗಿ ಈ ಕೃತಿಯಲ್ಲಿ ಪಡಿಮಾಡಿಸಿದವರು ಹರಿದಾಸ ಸಾಹಿತ್ಯದ ವಿಶೇಷ ಅಧ್ಯಯನವನ್ನು ಮಾಡಿರುವ ಟಿ.ಎನ್. ನಾಗರತ್ನ.

ಕೃತಿಯ ಪರಿವಿಡಿಯಲ್ಲಿ ಹಿನ್ನೆಲೆ, ಕನಕದಾಸರ ಜೀವನ ವಿಚಾರ, ಕಾಲ-ದೇಶ-ಮತ, ಕೀರ್ತನೆಗಳು, ಮುಂಡಿಗೆಗಳು, ಕಾವ್ಯಗಳು, ಉಪಸಂಹಾರ ಹಾಗೂ ಸಹಾಯಕ ಸಾಹಿತ್ಯ ಎಂಬ ಶೀರ್ಷಿಕೆಗಳಿವೆ

About the Author

ಟಿ.ಎನ್. ನಾಗರತ್ನ
(29 May 1945)

ಶ್ರೀಮತಿ ಡಾ. ಟಿ.ಎನ್.ನಾಗರತ್ನ ಇವರು ಹರಿದಾಸ ಸಾಹಿತ್ಯದಲ್ಲಿ ಮಹತ್ವದ ಹೆಸರು. 35 ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರಿನಲ್ಲಿ, ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ಕೀರ್ತನೆಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ನಾಗರತ್ನರವರು ಹುಟ್ಟಿದ್ದು ಮಧ್ಯಪ್ರದೇಶದ ಸಿಯೋನಿಯಲ್ಲಿ 1945 ಮೇ 29ರಂದು. 1965ರಲ್ಲಿ ಪ್ರಥಮದರ್ಜೆ, ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಪಡೆದ ಬಿ.ಎ. ಪದವಿ. ನಂತರ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ. ಇಲ್ಲೂ ಕೂಡ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಗಳಿಸಿದ ಪದವಿ. 1970ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ...

READ MORE

Related Books