ಬದುಕು ಬರಹ ಬವಣೆ

Author : ಲಕ್ಷ್ಮೀ ಮಚ್ಚಿನ

Pages 176

₹ 200.00




Year of Publication: 2023
Published by: ರೂಪ ಪ್ರಕಾಶನ
Address: 2406, 2407/ಕೆ -1, ಫಸ್ಟ್ ಕ್ಲಾಸ್, ಹೊಸಬಂಡಿಕೇರಿ, ಕೆ.ಆರ್‌. ಮೊಹಲ್ಲಾ ಮೈಸೂರು 570004
Phone: 9342274331

Synopsys

ಪ. ರಾಮಕೃಷ್ಣ ಶಾಸ್ತ್ರಿಯವರ ಬದುಕು-ಬರೆಹ-ಬವಣೆ ಎನ್ನುವ ಹೊತ್ತಗೆಯಲ್ಲಿ;ಶಾಸ್ತ್ರಿಯವರ ಮಗ ಲಕ್ಷ್ಮೀ ಮಚ್ಚಿನ ಅವರು ತನ್ನ ಅಪ್ಪ ಸಾಗಿ ಬಂದ ಹಾದಿಯ ಸಿಂಹಾವಲೋಕನ ಮಾಡಿದ್ದಾರೆ. ಒಂದರ್ಥದಲ್ಲಿ ಇದು ಶಾಸ್ತ್ರಿಯವರ ಆತ್ಮಕತೆ. ಸಾದರ ಪಡಿಸಿದ ರೀತಿ ಮಾತ್ರ ತುಸು ಭಿನ್ನ. ಈ ಕೃತಿಯಲ್ಲಿ ಶಾಸ್ತ್ರಿಯವರ ಬದುಕಿನ ವೈಯಕ್ತಿಕ ಮುಖ, ಕೌಟುಂಬಿಕ ಮುಖ, ಔದ್ಯೋಗಿಕ ಮುಖ ಮತ್ತು ಸಾಮಾಜಿಕ ಮುಖಗಳನ್ನು ಕಾಣಬಹುದು. ಮೊದಲ ಬಾರಿ ಶಾಸ್ತ್ರಿಯವರನ್ನು ನೋಡಿದವರಿಗೆ ಅವರೊಬ್ಬ ಯಾವುದೋ ಶಾಲೆಯ ನಿವೃತ್ತ ಅಧ್ಯಾಪಕರಿರಬೇಕು ಎಂದು ಅನುಮಾನ ಹುಟ್ಟಿದರೂ ಆಶ್ಚರ್ಯವಿಲ್ಲ.. ಇನ್ನೂ ಕೆಲವರಿಗೆ ಕೃಷಿರಂಗವನ್ನೇ ನೆಚ್ಚಿ ಬದುಕಿಗಾಗಿ ಹರಸಾಹಸ ಪಡುತ್ತಿರುವ ಅಸಹಾಯಕ ಕೃಷಿಕನಂತೆಯೂ ಕಾಣಬಹುದು. ಶಾಲೆಗೆ ಹೋಗಿ ಹೆಚ್ಚು ಕಲಿಯುವ ಅವಕಾಶ ಪ್ರಾಪ್ತವಾಗದಿದ್ದರೂ ಎಷ್ಟೋ ಮಂದಿ ಕಲಿತವರಿಗಿಂತ ಸಾಧನೆಯ ಹಾದಿಯಲ್ಲಿ ಬಹಳಷ್ಟು ಮುಂದೆ ಹೋದವರು ಶಾಸ್ತ್ರಿಗಳು ಖರ್ಚಿಗೆ ಬೇಕಾದಷ್ಟು ಹಣ ಗಳಿಸಬೇಕು ಎಂಬ ಒಂದೇ ಉದ್ದೇಶದಿಂದ ಬಾಲ್ಯದಲ್ಲಿ ಬರವಣಿಗೆ ಆರಂಭಿಸಿದ ಶಾಸ್ತ್ರಿಗಳು ಬಳಿಕ ಬರೆದೇ ಬದುಕಬಲ್ಲೆ ಎನ್ನುವ ಅಚಲ ನಿರ್ಧಾರ ತಾಳಿದವರು. ಈ ನಿರ್ಧಾರ ಎಂದೂ ಅವರ ಕೈ ಬಿಟ್ಟಿಲ್ಲ. ಇದಕ್ಕೆ ಅವರಲ್ಲಿರುವ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆ ಪೂರಕವಾಯಿತು ಪ್ರೇರಕವಾಯಿತು. - ಎಸ್. ನಿತ್ಯಾನಂದ ಪಡ್ರೆ.

About the Author

ಲಕ್ಷ್ಮೀ ಮಚ್ಚಿನ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಲಕ್ಷ್ಮೀ ಮಚ್ಚಿನ ಪ್ರಸ್ತುತ ಉಡುಪಿ ನಿವಾಸಿ. ಬೆಳ್ತಂಗಡಿ ತಾಲೂಕಿನಲ್ಲಿ ಪತ್ರಕರ್ತನಾಗಿ ತನ್ನ 20ನೆಯ ವಯಸ್ಸಿಗೆ ತೊಡಗಿಸಿಕೊಂಡು ಹೊಸದಿಗಂತ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕದ ಬಳಿಕ ಉದಯವಾಣಿಯಲ್ಲಿ 2008ರಲ್ಲಿ ವರದಿಗಾರನಾಗಿ ಸೇರಿ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ ಉಪಮುಖ್ಯ ವರದಿಗಾರನಾಗಿ ಕುಂದಾಪುರದಲ್ಲಿ 2018ರಿಂದ  ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ. ಕಳೆದ ಅಷ್ಟೂ ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಭ್ಯುದಯಕ್ಕಾಗಿ , ಪರಿಸರ ಪೂರಕವಾಗಿ ಮಾಡಿದ ವರದಿಗಳು ನೂರಾರು. ಇದರಲ್ಲಿ ಫಲ ಕಂಡು ಗ್ರಾಮಾಂತರದ ಸಮಸ್ಯೆ, ಬವಣೆ ನೀಗಲ್ಪಟ್ಟಿದ್ದು ಉಲ್ಲೇಖನೀಯ. ಮಾನವಾಸಕ್ತ ...

READ MORE

Related Books