ಚ.ವಾಸುದೇವಯ್ಯ

Author : ಬ.ನ. ಸುಂದರರಾವ್ (ವನವಿಹಾರಿ)

Pages 104

₹ 3.00




Year of Publication: 1977
Published by: ಕನ್ನಡ ಸಾಹಿತ್ಯ ಪರಿಷತ್
Address: ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು

Synopsys

ಹಿರಿಯ ಲೇಖಕ ಚ. ವಾಸುದೇವಯ್ಯನವರ ಜೀವನ ಮತ್ತು ಕಾರ್ಯಗಳ ಕುರಿತು ಲೇಖಕ ಬ.ನ.ಸುಂದರರಾವ್ ರಚಿಸಿರುವ ಕೃತಿ ಇದು. ಚ. ವಾಸುದೇವಯ್ಯನವರ ಕನ್ನಡ ಸೇವೆಯನ್ನು ಕನ್ನಡಿಗರಾರೂ ಮರೆಯುವಂತಿಲ್ಲ. ವಿದ್ಯಾಭ್ಯಾಸ ಇಲಾಖೆಯಲ್ಲಿ ಸಣ್ಣ ನೌಕರಿಯಲ್ಲಿದ್ದರೂ ಅವರ ಆಳವಾದ ಭಾಷಾಭ್ಯಾಸ, ಕನ್ನಡಾಭಿಮಾನ, ಅವರ ಪಂಡಿತ ಪ್ರತಿಭೆ, ಉಪಾಧ್ಯಾಯ ವೃತ್ತಿಯ ದಕ್ಷತೆ ಯಾರೂ ಮೆಚ್ಚುವಂಥದು. ಅವರು ಬೇರೆಯ ಭಾಷೆಯ ನೆರವಿನಿಂದ ಆರ್ಯಕೀರ್ತಿಯನ್ನು ಬೆಳಗಿಸಿದರೂ ಅಲ್ಲಿ ತಮ್ಮದೇ ಆದ ವ್ಯಕ್ತಿತ್ವವನ್ನು ನಿರೂಪಿಸಿದ್ದರು. ಕನ್ನಡದ ಅನೇಕ ಹಿರಿಯ ವಿದ್ವಾಂಸರು ಕನ್ನಡ ಕಲಿತಿದ್ದರೆ ದಿ.ಚ. ವಾಸುದೇವಯ್ಯನವರು ರಚಿಸಿದ ಬಾಲಬೋಧೆಗಳಿಂದ ಎಂದು ಹೇಳುವುದರಲ್ಲಿ ಆಶ್ಚರ್ಯವಿಲ್ಲ. ಅವರ ಬದುಕು-ಬರಹಗಳ ಮೇಲೆ ಬೆಳಕು ಚೆಲ್ಲುವ ಮಹತ್ವದ ಕೃತಿ ಇದು.

 

About the Author

ಬ.ನ. ಸುಂದರರಾವ್ (ವನವಿಹಾರಿ)
(26 March 1918 - 08 October 1986)

ಮೂಲತಃ ಬೆಂಗಳೂರು ದಕ್ಷಿಣ ತಾಲೂಕಿನ ವರ್ತೂರಿನವರಾದ ಬ.ನ.ಸುಂದರಾವ್ ಅವರ ಕಾವ್ಯನಾಮ-ವನವಿಹಾರಿ. ತಂದೆ ನರಸಿಂಹ ಮೂರ್ತಿ,  ತಾಯಿ ವಸಂತ ಲಕ್ಷ್ಮಮ್ಮ. ಇವರ ತಾತ ರಾಮಣ್ಣನವರು ಸಂಸ್ಕೃತ, ಕನ್ನಡ, ತೆಲುಗು ಭಾಷೆಯಲ್ಲಿ ಪಂಡಿತರು. ವರ್ತೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣವನ್ನು ಇಮ್ಮಡಿ ಹಳ್ಳಿಯ ಶಂಕರನಾರಾಯಣದಲ್ಲಿ ಹಾಗೂ ಹೈಸ್ಕೂಲು ಶಿಕ್ಷಣವನ್ನು ಮಾಗಡಿಯಲ್ಲಿ , ನ್ಯಾಷನಲ್ ವಿದ್ಯಾ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದರು. ಕೆಲಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದು, ನಂತರ ಮೈಸೂರು ಸರಕಾರದ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ಲೆಕ್ಕ ತನಿಖಾಧಿಕಾರಿಯಾಗಿದ್ದರು. ಅಂದಿನ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ.ಎನ್. ಕಿಣಿಯವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಶಿಕ್ಷಣಗ್ರಂಥ ‘ನಮ್ಮ ವಿದ್ಯಾಭ್ಯಾಸ; ಕೃತಿ ರಚಿಸಿದ್ದಾರೆ. ಈ ಕೃತಿ ...

READ MORE

Related Books