ಅಹೋಬಲ ಶಂಕರ

Author : ಎ.ಪಿ. ಮಾಲತಿ

Pages 92

₹ 60.00




Year of Publication: 2014
Published by: ಹೇಮಂತ ಸಾಹಿತ್ಯ
Address: #51/3, ಕಾಟನ್ ಪೇಟೆ ಮುಖ್ಯ ರಸ್ತೆ, ಬೆಂಗಳೂರು-560053
Phone: 9448064619

Synopsys

ಅನನ್ಯ ಅನುವಾದಕ ಅಹೋಬಲ ಶಂಕರ ಅವರ ಕುರಿತಂತೆ ಲೇಖಕಿ ಎ.ಪಿ. ಮಾಲತಿ ಅವರು ಬರೆದ ಕೃತಿ ಇದು. ಅಸಾಧಾರಣ ಭಾಷಾ ಪಾಂಡಿತ್ಯ, ಅನವರತ ಓದು, ಸಾಹಿತ್ಯ ಚಿಂತನೆ, ಸಿದ್ಧ ಹಸ್ತದ ಬರವಣಿಗೆ -ಇವು ಅನುವಾದ ಸಾಹಿತಿ ಎಂದೇ ಖ್ಯಾತಿಯ ಅಹೋಬಲ ಶಂಕರ ಅವರ ವ್ಯಕ್ತಿತ್ವದ ಲಕ್ಷಣಗಳು.

ಮೂಲತಃ ನಾಸ್ತಿಕರಾದರೂ ಮಾನವೀಯತೆಗೆ ಬೆಲೆ ಕೊಡುವವರು.‘ಅಹೋಬಲ ಶಂಕರ ಅವರನ್ನು ಪರಿಚಿತ ನೆಲೆಯಲ್ಲಿ ಅರಿತದ್ದು ಕಡಿಮೆಯಾದರೂ ನನ್ನ ಅರಿವಿಗೆ ಬಂದಷ್ಟು ಅವರ ಜೀವನದ ಕೆಲವು ಅಲರುಗಳನ್ನು ಹೊಂದಿಸಿ ರಚಿಸಿದ ಕೃತಿಯೇ ಈ ಪುಸ್ತಕ’ ಎಂದು ಲೇಖಕಿ, ಕೃತಿಗೆ ಬರೆದ ಪ್ರಸ್ತಾವನೆಯಲ್ಲಿ ಕಾಣಿಸಿದ್ದಾರೆ.

About the Author

ಎ.ಪಿ. ಮಾಲತಿ
(06 May 1944)

ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ  ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್‌, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...

READ MORE

Related Books