ವರಶಿಲ್ಪಿ ಗುಂಡಪ್ಪ ಮಾಯಾಚಾರ್ಯ

Author : ಎನ್. ಮರಿಶಾಮಾಚಾರ್

Pages 42

₹ 15.00




Published by: ಕರ್ನಾಟಕ ಶಿಲ್ಪಕಲಾ ಅಕಾಡೆಮಿ
Address: ಮೇಲ್ಮನೆ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು –560002

Synopsys

ಏಕಲವ್ಯನಂತೆ ಶಿಲ್ಪಕಲೆಯಲ್ಲಿ ಸಾಧನೆ ಮಾಡಿದವರು ಗುಂಡಪ್ಪ ಮಾಯಾಚಾರ್ಯರು. ಶಿಲ್ಪಕಲೆಯ ಶಿಕ್ಷಣವೇ ಇಲ್ಲದೆ ಬಿಳ್ಳೂರ ಗುರುಬಸವ ಸ್ವಾಮಿಗಳ ಮೂರ್ತಿ, ರಾಧಾಕೃಷ್ಣ, ತಾಯಿ ಮಗು, ಲಾಸ್ಯದ ಶಿವ, ನಟರಾಜ ವಿಗ್ರಹಗಳ ಕೆತ್ತನೆಯಿಂದ ಪ್ರಸಿದ್ಧಿಗೆ ಬಂದರು. ಅವರ ಜೀವನ - ಕಲಾರಾಧನೆ- ಕೆತ್ತಿದ ಶಿಲ್ಪಕಲೆಯ ಕುರಿತು ಈ ಕೃತಿ ಮಾಹಿತಿ ನೀಡುತ್ತದೆ.

ದೇವತಾ ವಿಗ್ರಹಗಳಲ್ಲಿ ಪ್ರಸನ್ನತೆ, ಶರಣರ ಸಂತರ ವಿಗ್ರಹಗಳಲ್ಲಿ ಪ್ರಶಾಂತ ದೃಷ್ಟಿ, ಸಮಾಜ ಸೇವಕರ ಮೂರ್ತಿಗಳಲ್ಲಿ ಚಿಂತನಶೀಲತೆಯ ಅಂಶಗಳಿಂದ ಕಡೆದ ವಿಗ್ರಹಗಳು. ಕಾಳಿಕಾ, ಶಾರದಾ, ಮಹಾಲಕ್ಷ್ಮಿ, ಮಾರುತಿ, ಈಶ್ವರ, ಅನ್ನಪೂರ್ಣೆ, ಬಕುಳಾಂಬಿಕೆ ಸಂತೋಷಿಮಾತಾ, ಗಣೇಶ, ಬ್ರಹ್ಮ ಮುಂತಾದ 2500ಕ್ಕೂ ಹೆಚ್ಚು ಶಿಲ್ಪಿಗಳ ರಚನೆಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ. ಈ ಕೃತಿಯನ್ನು ಎನ್. ಮರಿಶಾಮಾಚಾರ್ ಸಂಪಾದಿಸಿದ್ದಾರೆ.

About the Author

ಎನ್. ಮರಿಶಾಮಾಚಾರ್
(15 May 1951 - 03 April 2013)

ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್‌ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್‌  ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್‌ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು. ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್‌ ಅವರು ಜಯನಗರದ ಆರ್‌.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್‌ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್‌.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ...

READ MORE

Related Books