ಬಡವರ ಬಂಧು ಬಾಣಸಂದ್ರ ಹುಚ್ಚೇಗೌಡ

Author : ಕೆ. ಪುಟ್ಟರಂಗಪ್ಪ

Pages 180

₹ 220.00




Year of Publication: 2021
Published by: ವಿಕಸನ ಪ್ರಕಾಶನ
Address: ವಿಜ್ಞಾತಂ ಭವನ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ, ಬಿ.ಜಿ. ನಗರ- 571448, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ
Phone: 9481908555

Synopsys

‘ ಬಡವರ ಬಂಧು ಬಾಣಸಂದ್ರ ಹುಚ್ಚೇಗೌಡ’ ಕೃತಿಯು ಕೆ. ಪುಟ್ಟರಂಗಪ್ಪ ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಮಾಜಿ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು, ಬಾಣಸಂದ್ರ ಹುಚ್ಚೇಗೌಡರು ರಾಜಕಾರಣಿಗಳಲ್ಲಿ ಅಪರೂಪವೆನಿಸಿದವರು, ಅವರ ಬದುಕು, ವ್ಯಕ್ತಿತ್ವ, ಅವರು ನಂಬಿದ್ದ ಜೀವನ ಮೌಲ್ಯಗಳು ಹಾಗೂ ಸಾಧನೆಗಳು ಇಂದಿನ ಪೀಳಗೆಗೆ ದಾರಿದೀಪ, ನಮ್ಮ ತಂದೆ ಗಂಗಾಧರಯ್ಯನವರು ಹಾಗೂ ಗೌಡರು ಆತ್ಮೀಯ ಸ್ನೇಹಿತರು. ನಮ್ಮ ತಂದೆಯವರ ಬದುಕಿನಲ್ಲಿ ಬೀಸಿದ ತಂಗಾಳಿ ಎಂದರೆ ಗೌಡರ ಅನುಪಮ ಸ್ನೇಹ, ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ನಮ್ಮ ತಂದೆ ಗೌಡರ ಸಹಕಾರ ಹಾಗೂ ಔದಾರ್ಯಗಳಿಂದಾಗಿ ರಾಜಕೀಯರಂಗ ಪ್ರವೇಶಿಸಿದರು. ವಿಧಾನ ಪರಿಷತ್ತಿನ ಸದಸ್ಯರಾಗಿ ಗೌಡರಂತೆಯೇ ಪ್ರಾಮಾಣಿಕ ಬದುಕು ಸಾಗಿಸಿದರು. ನನಗೂ ಕೂಡ ರಾಜಕೀಯ ಪ್ರವೇಶಿಸಲು ನಮ್ಮ ತಂದೆಯಷ್ಟೇ ಗೌಡರು ಕೂಡ ಪ್ರೇರಣೆಯಾದರು. ನಮ್ಮ ತಂದೆ ಸಾಧನೆಯ ಶಿಲ್ಪಿಯಾದರೆ ಹುಚ್ಚೇಗೌಡರು ರಾಜಕೀಯ ರತ್ನ ಎಂದಿದ್ದಾರೆ.

About the Author

ಕೆ. ಪುಟ್ಟರಂಗಪ್ಪ

ಕೆ. ಪುಟ್ಟರಂಗಪ್ಪ ಅವರು ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕುಡುವನಘಟ್ಟ ಗ್ರಾಮದವರು. 1957 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಪದವೀಧರರು. ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ 57 ವರ್ಷಗಳ ಬೋಧನಾನುಭವ. ಅಧ್ಯಯನ, ಸಂಶೋಧನೆಯಲ್ಲಿ ಆಸಕ್ತಿ. ಕೃತಿಗಳು ; ವೀರಪಥ, ಮರೆಯಲಾಗದ ಮಹಾನುಭಾವರು, ನಮ್ಮ ಸಾಧಕರು, ಬಡವರಬಂಧು ಬಾಣಸಂದ್ರ ಹುಚ್ಚೇಗೌಡ, ತುಮಕೂರಿನ ವೀರವನಿತೆಯರು. ...

READ MORE

Related Books