ಅರಿವಿನ ಗುರು

Author : ರಘುಶಂಖ ಭಾತಂಬ್ರಾ

Pages 572

₹ 550.00




Year of Publication: 2021
Published by: ಬಸವಸಿರಿ ಪ್ರಕಾಶನ
Address: ‘ಚನ್ನಬಸವ ನಿಲಯ’ ಭಾಲ್ಕಿ- 585328 ಬೀದರ ಜಿಲ್ಲೆ.

Synopsys

ವೀರಶೆಟ್ಟಿ ಬಾವುಗೆ ಅವರ ಬದುಕು -ಬರಹ ಕುರಿತಾದ ಕೃತಿ-ಅರಿವಿನ ಗುರು. ರಘುಶಂಖ ಭಾತಂಬ್ರಾ ಪ್ರಧಾನ ಸಂಪಾದಕರು, ರಾಮಚಂದ್ರ ಗಣಾಪೂರ ಸಂಪಾದಕರು. ‘ವೀರಶೆಟ್ಟಿ ಬಾವುಗೆ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವ ಕಳಕಳಿ ಎಲ್ಲ ಸಂದರ್ಭಗಳಲ್ಲೂ ಮಾದರಿಯಾಗಿದೆ. ವಿಷಯವನ್ನು ಮನವರಿಕೆ ಮಾಡಿ ಕೊಡುವ ಶ್ರೀಯುತರ ಸ್ವಭಾವ, ಯಾರನ್ನು ನೋಯಿಸದ, ಯಾರ ತಂಟೆ ತಕಾರಾರಿಗೂ ಹೋಗದೆ ತಮ್ಮ ಪಾಡಿಗೆ ತಾವು ಶೈಕ್ಷಣಿಕ ಸೇವೆ ಸಲ್ಲಿಸುತ್ತ ಅಪರೂಪದ ಬರಹದ ಮೂಲಕ ಸಾಹಿತ್ಯ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಶರಣ ಸಾಹಿತ್ಯದ ಆಲೋಚನಾ ಲಹರಿಗೆ, ಆ ತತ್ವ ಸಿದ್ಧಾಂತಗಳ ಅನುಷ್ಠಾನದ ನಿಲುವಿಗೆ, ಕನ್ನಡ ನಾಡಿನ ಪಂಡಿತ ಕವಿಗಳ, ಗುರುಹಿರಿಯರ ಮೇಲಿಟ್ಟ ಶ್ರದ್ಧೆ, ನಿಷ್ಠೆಗೆ ಅವರ ಬದುಕೊಂದು ಕೈಗನ್ನಡಿಯಾಗಿದೆ. ಅವರ ಬದುಕು ಬರಹ ಕುರಿತಂತೆ ವಿಭಿನ್ನ ಆಯಾಮಗಳಲ್ಲಿ ಚಿಂತಿಸಲು ನಿರ್ಧರಿಸಿದ ಪರಿಣಾಮವೇ ಈ ಗ್ರಂಥ’ ಎಂದು ಸಂಪಾದಕರು ಹೇಳಿದ್ದಾರೆ.

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books