ವಿಶ್ವವಿಜೇತ ವಿವೇಕಾನಂದ, ಸಂಪುಟ-2

Author : ಸ್ವಾಮಿ ಪುರುಷೋತ್ತಮಾನಂದ

Pages 446

₹ 120.00




Year of Publication: 2014
Published by: ಶ್ರೀ ರಾಮಕೃಷ್ಣಾಶ್ರಮ
Address: ಯಾದವಗಿರಿ, ಮೈಸೂರು

Synopsys

ಸ್ವಾಮಿ ಪುರುಷೋತ್ತಮಾನಂದ ಅವರು ರಚಿಸಿದ ಕೃತಿ-ವಿಶ್ವವಿಜೇತ ವಿವೇಕಾನಂದ ಸಂಪುಟ-2. ವಿವೇಕಾನಂದರು ವಿಶೇಷವಾಗಿ ಯುವಜನತೆಗೆ ನೀಡಿದ ಸಂದೇಶ ಕಾಲ-ದೇಶಾತೀತವಾದುದು. ಭಾರತೀಯ ಸಂಸ್ಕೃತಿ ಕುರಿತು ಅವರು ವಿಶ್ವದೆಲ್ಲೆಡೆ ಸಾರಿದ ಸಂದೇಶ ಅಮೋಘವಾದುದು. ದೇಶ ಕಟ್ಟುವಲ್ಲಿ ಯುವ ಜನತೆಯ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಹೇಳಿದವರು. ವಿಶ್ವದ ಯುವಕರೂ ಸಹ ಇವರ ಸಂದೇಶ ಪಾಲನೆ ಅಗತ್ಯ. ಈ ಸಂದೇಶಗಳು ದೇಶಕ್ಕೆ ಮಾತ್ರ ಸೀಮಿತವಲ್ಲ. ಇಂತಹ ಸಂಗತಿಗಳನ್ನು ಅನುಸರಿಸಿ ಲೇಖಕರು ಈ ಕೃತಿ ರಚಿಸಿದ್ದು, ಸ್ವಾಮಿ ವಿವೇಕಾನಂದರ ಸಂದೇಶಗಳ ಸರಳೀಕರಣಕ್ಕೆ ಈ ಕೃತಿ ಯತ್ನಿಸಿದೆ.

About the Author

ಸ್ವಾಮಿ ಪುರುಷೋತ್ತಮಾನಂದ
(14 June 1931 - 25 February 2005)

ಖ್ಯಾತ ಚಿಂತಕ ಸ್ವಾಮಿ ಪುರುಷೋತ್ತಮಾನಂದರುದ.ಕ. ಜಿಲ್ಲೆಯ ಸಾಲಿಗ್ರಾಮ ಬಳಿಯ ಮೂಡಹಾಡು ಗ್ರಾಮದವರು. ಮೂಲ ಹೆಸರು ರಾಮಚಂದ್ರ ಬಾಯಿರಿ. ಮಲ್ಪೆಯಲ್ಲಿ ಮೆಟ್ರಿಕುಲೇಷನ್ ಮುಗಿಸಿದರು. ನಂತರ ಬೆಂಗಳೂರಿನ ರಾಮಕೃಷ್ಣಾಶ್ರಮ ಪ್ರವೇಶಿಸಿದರು. ಮುಕುಂದ ಚೈತನ್ಯ ಎಂಬ ಹೆಸರಿನ ಬ್ರಹ್ಮಚಾರಿಯಾಗಿ ಸ್ವಾಮೀಜಿಯವರು ಬೇಲೂರು ಮಠದಲ್ಲಿ ಎರಡು ವರ್ಷಗಳ ತರಬೇತಿ ಪಡೆದರು. ನಂತರ ಪ್ರವಚನಕಾರರಾಗಿ ಮುಂದುವರಿದರು.  “ನಾನು ಮಾನವತೆಯ ಪ್ರೇಮದಿಂದ ಬಂಧಿತನಾಗಿದ್ದೇನೆ”.ಎನ್ನುವುದು ಅವರ ಪ್ರವಚನದ ಜೀವಾಳವಾಗಿತ್ತು. ಕೊಡಗು, ಬೆಳಗಾವಿ ಹೀಗೆ ರಾಜ್ಯದ ವಿವಿಧೆಡೆ ಶ್ರೀರಾಮಕೃಷ್ಣಾಶ್ರಮದ ಶಾಖೆಗಳನ್ನು ಆರಂಭಿಸಿದರು. ಅವರು ಉತ್ತಮ ಹಾಡುಗಾರರೂ ಆಗಿದ್ದು, ಹಲವಾರು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ.  ಕೃತಿಗಳು : ವೀರ ಸಂನ್ಯಾಸಿ ವಿವೇಕಾನಂದ, ವಿಶ್ವವಿಜೇತ ವಿವೇಕಾನಂದ, ವಿಶ್ವಮಾನವ ...

READ MORE

Related Books