ಭಾರತರತ್ನ ಅಂಬೇಡ್ಕರ್‌

Author : ಕಂನಾಡಿಗಾ ನಾರಾಯಣ

Pages 68

₹ 80.00




Year of Publication: 2017
Published by: ಸಿ.ವಿ.ಜಿ ಪಬ್ಲಿಕೇಶನ್ಸ್
Address: ನಂ 277, 5ನೇ ಅಡ್ಡರಸ್ತೆ, ವಿಧಾನಸೌದ ಲೇಔಟ್, ಲಗ್ಗೆರೆ, ಬೆಂಗಳೂರು - 560058

Synopsys

ತಮ್ಮ ಉಜ್ವಲ ಬದುಕಿನ ಮೂಲಕ ದೇಶಕ್ಕೆ ಬೆಳಕಾದ, ದಾರಿದೀಪವಾದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಜೀವನ ಚರಿತ್ರೆಯನ್ನು ಲೇಖಕ ಕಂನಾಡಿಗಾ ನಾರಾಯಣ ಅವರು ಚಿತ್ರಿಸಿದ್ದಾರೆ.

ನಮ್ಮ ಸಮಕಾಲೀನ ಬದುಕನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಒಳನೋಟಗಳನ್ನು ಈ ಕೃತಿಯಿಂದ ಪಡೆಯಬಹುದು. ಇಂದಿನ ಯುವ ಜನಾಂಗಕ್ಕೆ ವಿಶೇಷವಾಗಿ ಮಕ್ಕಳಿಗೆ ತಮ್ಮ ಬದುಕನ್ನು ವಿಶಿಷ್ಟವಾಗಿ ಕಟ್ಟಿಕೊಳ್ಳಲು ಪ್ರೇರಕಶಕ್ತಿಗಳಾಗಿ, ಸ್ಫೂರ್ತಿಯ ಸೆಲೆಗಳಾಗಿ ಪರಿಣಾಮಕಾರಿ ಈ ಕೃತಿ ಪಾತ್ರವಹಿಸಬಲ್ಲುದು.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Related Books