ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಹೆಣ್ಣು ಎಂದರೆ ಏನು...!. ಬುದ್ಧನ ಚಿಂತನೆಗಳಲ್ಲಿ ರೂಪುಗೊಂಡ ಕೃತಿ ಇದು. ಅಮರ ಜಾತಕ ಕಥೆಗಳನ್ನು ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗಿದೆ. ಇಲ್ಲಿನ ಕಥೆಗಳ ಉದ್ದೇಶ, ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. ಇಲ್ಲಿಯ ಕಥೆಗಳಲ್ಲಿ ಹೆಣ್ಣಿಗೆ ನೀಡಲಾದ ಉನ್ನತ ಹಾಗೂ ಉತ್ತಮ ಸ್ಥಾನಗಳ ಬಗ್ಗೆ, ಅವರಿಗೆ ನೀಡಬೇಕಿರುವ ಗೌರವಗಳ ಬಗ್ಗೆ ಹಾಗೂ ಹೆಣ್ಣಿನ ಮಹತ್ವದ ಬಗ್ಗೆ ವಿವರಗಳಿವೆ. 25 ಬಿಡಿ ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟವಾಗಿದೆ.