ಬ್ರಹ್ಮಪುರಿಯ ಭಿಕ್ಷುಕ

Author : ಶತಾವಧಾನಿ ಆರ್. ಗಣೇಶ

Pages 310

₹ 150.00




Year of Publication: 2008
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

`ಬ್ರಹ್ಮಪುರಿಯ ಭಿಕ್ಷುಕ'  ಹಿರಿಯ ಕವಿ ಡಿ.ವಿ.ಜಿ. ಅವರ ಜೀವನ ಪ್ರಸಂಗಗಳ ಲೇಖನ ಸಂಗ್ರಹ ಕೃತಿ. ಲೇಖಕ ಶತಾವಧಾನಿ ಆರ್.‌ ಗಣೇಶ್‌ ರಚಿಸಿದ್ದಾರೆ. ಡಿ.ವಿ.ಜಿ. ಕನ್ನಡ ಸಾಹಿತ್ಯ ವನದ ಅಶ್ವತ್ಥ ವೃಕ್ಷ. ಬರೆದಂತೆ ಬಾಳಿದ ವಿರಳ ರೀತಿಯ ಮಹಾನುಭಾವರಲ್ಲಿ ಇವರು ಅಗ್ರಗಣ್ಯರು. ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಸಮಾಜಸೇವೆ ಗಳಂತಹ ಹತ್ತಾರು ಗಂಭೀರ ಪ್ರಕಾರಗಳಲ್ಲಿ ದುಡಿದ ಡಿವಿಜಿ ಅವರ ಬದುಕೇ ಒಂದು ಮಹಾಕಾವ್ಯ. ಇಂಥ ಜೀವನರಸಿಕರ ಬಾಳಿನಲ್ಲಿ ನಡೆದ ನೂರಾರು ರಸಮಯ ಪ್ರಸಂಗಗಳ ರೋಚಕ ಹಾಗೂ ಉದ್ಬೋದಕ ನಿರೂಪಣೆ ಇಲ್ಲಿದೆ.

About the Author

ಶತಾವಧಾನಿ ಆರ್. ಗಣೇಶ
(04 December 1962)

ಶತಾವಧಾನಿ ಗಣೇಶ ಅವರು ಉತ್ತಮ ವಾಗ್ಮಿಗಳು. ವಿದ್ವಾಂಸರು. ಅವಧಾನ ಕಲೆಯನ್ನು ರೂಢಿಸಿಕೊಂಡವರು. “ಕನ್ನಡದಲ್ಲಿ ಅವಧಾನ ಕಲೆ” ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿದ್ದಾರೆ. ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಯ ಪುತ್ರರು.04-12-1962ರಂದು ಕೋಲಾರದಲ್ಲಿ ಜನನ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವೀಧರರು. ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ...

READ MORE

Related Books