ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದಲಿತ ಚಳವಳಿ ಮತ್ತು ಭೂ ಹೋರಾಟ

Author : ಎಚ್.ಎಸ್. ಬೇನಾಳ

Pages 86

₹ 70.00




Year of Publication: 2016
Published by: ಸಹನಾ ಪ್ರಕಾಶನ
Address: #408, ಸಿ.ಬಿ.ಐ.ಕಾಲೋನಿ, ಕೇಂದ್ರ ಬಸ್ ನಿಲ್ದಾಣದ ಹಿಂಭಾಗ, ಎಂ.ಎಸ್.ಕೆ.ಮಿಲ್ ರಸ್ತೆ, ಕಲಬುರಗಿ-585103
Phone: 9901177823

Synopsys

ಕರ್ನಾಟಕ ರಾಜ್ಯದಲ್ಲಿ ನಡೆದ ದಲಿತ ಚಳವಳಿಗಳ ವಿವಿಧ ಆಯಾಮಗಳನ್ನು ಅಂಕಿ-ಅಂಶಗಳು ಸಮೇತ ವಿವರಿಸುವ ಕೃತಿ ’ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದಲಿತ ಚಳವಳಿ ಮತ್ತು ಭೂ ಹೋರಾಟ’.

ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವಿಲ್ಲದೇ ರಾಜಕೀಯ ಪ್ರಜಾಪ್ರಭುತ್ವ ಅರ್ಥಹೀನ ಎಂಬ ಅಂಬೇಡ್ಕರರ ವಿಚಾರಗಳ ಹಿನ್ನೆಲೆಯಲ್ಲಿ ಲೇಖಕರು, ಭೂ ಹೀನ ದಲಿತರಿಗೆ ಭೂಮಿ ನೀಡುವಂತೆಯೂ ತಮ್ಮ ಲೇಖನದ ಮೂಲಕ ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಸರರ್ಕಾರದ ಯೋಜನೆಗಳು ಉದ್ದೇಶ ವಿಮುಖವಾಗುತ್ತಾ ದಲಿತರನ್ನು ಶೋಷಿಸುತ್ತಲೇ ಯಥಾಸ್ಥಿತಿವಾದವನ್ನು ಮುಂದುವರಿಸುತ್ತಿದ್ದು, ಇನ್ನೆಷ್ಟು ದಿನ ಸಹಿಸಬೇಕು ಎಂದೂ ಪ್ರಶ್ನಿಸುವ ಮೂಲಕ ಜನಜಾಗೃತಿಯನ್ನು ಆಶಿಸುತ್ತಾರೆ.

About the Author

ಎಚ್.ಎಸ್. ಬೇನಾಳ

ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...

READ MORE

Related Books