ಗೌರೀಶ ಕಾಯ್ಕಿಣಿ ಸಾಹಿತ್ಯ ಸಮೀಕ್ಷೆ

Author : ಬರಗೂರು ರಾಮಚಂದ್ರಪ್ಪ

Pages 156

₹ 12.00




Year of Publication: 1993
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ನೃಪತುಂಗ ರಸ್ತೆ,  ಬೆಂಗಳೂರು- 560002

Synopsys

‘ಗೌರೀಶ ಕಾಯ್ಕಿಣಿ ಸಾಹಿತ್ಯ ಸಮೀಕ್ಷೆ’ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ಕೃತಿ. ಇಲ್ಲಿ ಗೌರೀಶ ಕಾಯ್ಕಿಣಿ ಅವರ ಬದುಕು ಬರಹಗಳ ಕುರಿತು ವಿವಿಧ ಲೇಖಕರು, ಸ್ನೇಹಿತರು ಬರೆದ ಆಪ್ತ ಲೇಖನಗಳಿದ್ದು ಬರಗೂರು ರಾಮಚಂದ್ರಪ್ಪ ಅವರು ಈ ಕೃತಿಯ ಪ್ರಧಾನ ಸಂಪಾದಕರು. ಮಹೇಶ ಅಡಕೋಳಿ ಅವರ ಗೌರೀಶರ ರೂಪಕಗಳು- ಒಂದು ಅವಲೋಕನ, ಪ್ರೊ.ಜಿ.ಎಸ್. ಅವಧಾನಿ ಅವರ ಗೌರೀಶರ ಗದ್ಯ, ಆರ್.ವಿ. ಭಂಡಾರಿ ಅವರ ಗೌರೀಶರ ವಿಮರ್ಶೆ, ವಿ.ಎನ್. ಹೆಗಡೆ ಅವರ ಗೌರೀಶರ ಅನುವಾದ, ಅಮ್ಮೆಂಬಳ ಆನಂದ ಅವರ ಗೌರೀಶರ ಪತ್ರಿಕೋದ್ಯಮ, ಡಾ.ಜಿ.ಎಸ್. ಆಮೂರ ಅವರ ಗೌರೀಶಕಾಯ್ಕಿಣಿ ಹಾಗೂ ವಿ.ಜಿ. ಭಟ್ಟರ ಸಾಹಿತ್ಯ, ಎಂ.ಜಿ. ಹೆಗಡೆ ಅವರ ಗೌರೀಶರ ಸಾಧನೆ- ಒಂದು ಸಮೀಕ್ಷೆ, ಗೌರೀಶರ ಸಾಹಿತ್ಯ- ಒಂದು ಚರ್ಚೆ, ಮತ್ತು ಗೌರೀಶರ ಕೃತಿಸೂಚಿ ಹಾಗೂ ಸ್ವತಃ ಗೌರೀಶ ಕಾಯ್ಕಿಣಿ ಅವರ ನಾನೇಕೆ ಬರೆಯುತ್ತೇನೆ ಎಂಬ ಲೇಖನಗಳು ಸಂಕಲನಗೊಂಡಿವೆ.

 

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books