ಪತ್ರಗಳು ಚಿತ್ರಿಸಿದ ಗೋವಿಂದ ಪೈ

Author : ಶ್ರೀನಿವಾಸ ಹಾವನೂರ

Pages 140

₹ 22.00




Year of Publication: 1987
Published by: ವಿನಯ ಪ್ರಕಾಶನ
Address: 369, ಐಎನ್ ಬ್ಲಾಕ್, ರಾಜಾಜಿನಗರ್, ಬೆಂಗಳೂರು- 560010

Synopsys

ಗೋವಿಂದ ಪೈ ಅವರ ಪತ್ರ ವ್ಯವಹಾರಗಳ ಮೇಲೆ ಬೆಳಕು ಚೆಲ್ಲುವ ಕೃತಿ ‘ಪತ್ರಗಳು ಚಿತ್ರಿಸಿದ ಗೋವಿಂದ ಪೈ’ ಲೇಖಕ ಶ್ರೀನಿವಾಸ ಹಾವನೂರರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಪತ್ರ ಸಾಹಿತ್ಯದಲ್ಲಿ ನನಗೆ ಮೊದಲಿನಿಂದಲೂ ಆಸ್ಥೆ-ಅದೊಂದು ಸಾಹಿತ್ಯಾಭ್ಯಾಸದ ಅಮೂಲ್ಯ ಸಾಧನವೆಂದು. ಆಂಗ್ಲ ಕವಿ-ಲೇಖಕರನೇಕರ ಪತ್ರ- ಸಂಗ್ರಹಾ ವೃತ್ತಿಗಳನ್ನು ನೋಡಿದ್ದೆ. ಕನ್ನಡದಲ್ಲಿ ಒಂದಾದರೂ ಇಲ್ಲ ಎಂದುಕೊಳ್ಳುತ್ತಿದ್ದಾಗ ನಮ್ಮ ಕು.ಶಿ. ಹರಿದಾಸ ಭಟ್ಟರು 1963ರಲ್ಲಿ ಪೈ ಪತ್ರ ಸಂಗ್ರಹಕ್ಕೆ ಉದ್ಯುಕ್ತರಾದದ್ದೂ ದೀವಿಗೆ-1 ರಲ್ಲಿ ಪೈಗಳ ಐವತ್ತು ಪತ್ರಗಳನ್ನು ಪ್ರಕಟಿಸಿದ್ದುದೂ ನನಗೆ ಸಂತೋಷವನ್ನುಂಟುಮಾಡಿದ್ದಿತು. ಆದರೂ ಅವರಿಗೆ ನಾನು ಇಷ್ಟೇನೆ ಎಂದು ಕೇಳಿದ್ದುಂಟು. ಮುಂದೆ ಇಪ್ಪತ್ತು ವರ್ಷಗಳ ಆನಂತರ ಪೈಗಳ ಜನ್ಮಶತಾಬ್ದಿಯ ಕಾಲಕ್ಕೆ ಮಂಗಳೂರು ವಿಶ್ವವಿದ್ಯಾಲನಿಲಯದ ಕನ್ನಡ ಅಧ್ಯಯನ ವಿಭಾಗದ ಪರವಾಗಿಯೂ ರಾಷ್ಟ್ರಕವಿ ಗೋವಿಂದ ಪೈಗಳ ಸಂಶೋಧನ ಕೇಂದ್ರದ ಪರವಾಗಿಯೂ ಇನ್ನಷ್ಟು ಪತ್ರಗಳನ್ನು ಸಂಗ್ರಹಿಸಲಾಯಿತು’ ಈ ಮಧ್ಯೆ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರದ ಸಂಸ್ಥೆಯವರು ಗೋವಿಂದ ಪೈಗಳ ಕುರಿತು ಭಾಷಣ ಮಾಡಲು ನನಗೆ ಕೇಳಿದಾಗ ನಾನು ಅವರ ಪತ್ರಗಳ ವಿಷಯವನ್ನೇ ಆಯ್ದುಕೊಂಡೆ. ಅದನ್ನು ಜಿ.ಪಿ. ರಾಜರತ್ನಂ ಸ್ಮಾರಕ ಉಪನ್ಯಾಸ ಮಾಲೆಯ ಅಂಗವಾಗಿ ಏರ್ಪಡಿಸಿದ್ದುದು ಅರ್ಥಪೂರ್ಣವಾಗಿದ್ದಿತು. ಏಕೆಂದರೆ ಪೈ ಅವರ ಪತ್ರಸಾಹಿತ್ಯಕ್ಕೂ ರಾಜರತ್ನಂ ಅವರಿಗೂ ಒಂದು ಬಗೆಯ ಅವಿನಾಭಾವಿಯಾದ ಸಂಬಂಧ. ಅವರು ಪೈಗಳೊಡನೆ ಅಖಂಡ ಮೂವತ್ತು ವರ್ಷಗಳ ಕಾಲ ಪತ್ರವ್ಯವಹಾರ ಮಾಡಿದವರು. ಮಾತ್ರವಲ್ಲದೆ ಅವನ್ನು 1971ರಲ್ಲಿ ಪ್ರಕಟಿಸಿದ್ದಾರೆ. (ಮಂಜೇಶ್ವರದ ಶ್ರೀಎಂ.ಗೋವಿಂದ ಪೈ ಅವರ ಕೆಲವು ಪತ್ರಗಳು) ಇನ್ನು ಕೆಲವರು ಬಿಡಿಯಾಗಿ ತಮ್ಮಲ್ಲಿದ್ದ ಪೈ ಪತ್ರಗಳನ್ನು ಪ್ರಕಟಿಸಿದ್ದೂ ಇದೆ. ಆದರೆ ಈಚಿನ ಎರಡು ವರ್ಷಗಳಲ್ಲಿ ನಾವು ಸಂಗ್ರಹಿಸಿದ ಪತ್ರಗಳು ಅಪ್ರಕಟಿಸವಿವೆ. ಆದ್ದರಿಂದ ಪೈ ಅವರ ಎಲ್ಲ ಪತ್ರಗಳು (ರಾಜರತ್ನಂ ಪ್ರಕಟಿಸಿದುವನ್ನು ಬಿಟ್ಟು) ಏಕತ್ರ ದೊರೆಯುವಂತಾಗಬೇಕೆಂದು ಯೋಚಿಸಿ. ಅವನ್ನೆಲ್ಲಾ ಇಲ್ಲಿ ಸಂಕಲಿಸಿ ಹೊರತರುತ್ತಲಿದ್ದೇವೆ ಎಂದಿದ್ದಾರೆ ಶ್ರೀನಿವಾಸ ಹಾವನೂರು.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books