ಸಾರಸ್ವತ ಸಂಪತ್ತು

Author : ಬನ್ನಂಜೆ ಗೋವಿಂದಾಚಾರ್ಯ

Pages 112

₹ 95.00




Year of Publication: 2015
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 08026617100

Synopsys

ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಬರೆದ ಕೃತಿ ಸಾರಸ್ವತ ಸಂಪತ್ತು. ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾಡಿದ ಭಾಷಣವೂ ಈ ಸಂಕಲನದಲ್ಲಿದೆ. ತಮ್ಮ ಖೇದ, ಆಕ್ರೋಶಗಳನ್ನು, ವ್ಯವಸ್ಥೆಯ ದೋಷಗಳನ್ನು ಹೇಳಿದ್ದಾರೆ. ಆಗಾಗ್ಗೆ ಬರೆದ ಬಿಡಿ ಬರಹಗಳ ಸಂಕಲನವಿದು. ಲೌಕಿಕ-ಅಲೌಕಿಕ ವಿಷಯ ವಸ್ತು, ಸಾಮಾಜಿಕ ಚಿಂತನೆ ಇಂತಹ ಅಂಶಗಳನ್ನು ಒಳಗೊಂಡ ಇವರ ಪ್ರತಿ ಬರಹವು ವೈಚಾರಿಕವಾಗಿಯೂ ಸಮೃದ್ಧವಾಗಿವೆ. ಈ ಬರಹಗಳು ಆಳ ಅಧ್ಯಯನಕ್ಕೆ, ಅನುಭವದ ಗಟ್ಟಿತನಕ್ಕೆ ಹಾಗೂ ತೀಕ್ಷ್ಣ ದೃಷ್ಟಿಯ ದ್ಯೋತಕವಾಗಿವೆ.

About the Author

ಬನ್ನಂಜೆ ಗೋವಿಂದಾಚಾರ್ಯ

 ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರು. ಇವರು ಉಡುಪಿ  ಜಿಲ್ಲೆಯ ಅಂಬಲಪಾಡಿಯಲ್ಲಿ  1936 ರಲ್ಲಿ ಜನಿಸಿದರು. ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದಾರೆ. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.  ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ , ಶಿವಸೂಕ್ತ, ...

READ MORE

Related Books