ಶಿಕ್ಷಕನ ಮನದಾಳದಿಂದ

Author : ಡಿ.ಎನ್‌. ಅಕ್ಕಿ

Pages 73

₹ 80.00




Year of Publication: 2019
Published by: ಕವಿಕುಂಚ ಪ್ರಕಾಶನ
Address: ಅಂಚೆ ಗೋಗಿ, ತಾ: ಶಹಾಪುರ, ಜಿ: ಯಾದಗಿರಿ
Phone: 9448577898

Synopsys

ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾದ ಡಿ.ಎನ್. ಅಕ್ಕಿ ಅವರು ಸಾಹಿತ್ಯ, ಸಂಶೋಧನೆಯನ್ನು ತಮ್ಮ ಹವ್ಯಾಸವಾಗಿಸಿಕೊಂಡು, ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ”ಮಾರ್ಗದರ್ಶನ’ ಮಾಸಿಕದಲ್ಲಿ ಬರೆದ ಲೇಖನಗಳ ಸಂಗ್ರಹವಿದು. 2008ರಲ್ಲಿ ಪ್ರಥಮ ಮುದ್ರಣ ನಂತರ 2019ರಲ್ಲಿಎರಡನೇ ಬಾರಿ ಮುದ್ರಣವಾಗಿದೆ. ಜನಪದ, ಇತಿಹಾಸ, ಪರಂಪರೆ, ಸಂಸ್ಕೃತಿ, ಸಂಶೋಧನೆ, ಧರ್ಮ ಇತ್ಯಾದಿ ಕುರಿತ ಒಟ್ಟು 19 ಲೇಖನಗಳಿವೆ. ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರುಕರ್ ಬರೆದ ಮುನ್ನಡಿಯಲ್ಲಿ ’ಹವ್ಯಾಸಿ ಸಂಶೋಧಕ ಡಿ.ಎನ್.ಅಕ್ಕಿ, ಶಿಕ್ಷಣ-ಶಿಕ್ಷಕರ ಬಗ್ಗೆ ಅರ್ಥಪೂರ್ಣವಾಗಿ ಬರೆದಿದ್ದಾರೆ. ಆತ್ಮಕಥನ ಎಂಬಂತೆ ಮೇಲ್ನೋಟಕ್ಕೆ ಕಂಡುಬಂದರೂ ಇಲ್ಲಿಯ ವಿಚಾರಗಳು ಹಲವು ದಿಗಂತಗಳನ್ನು ಆವರಿಸಿಕೊಳ್ಳುತ್ತಾ ಹೋಗುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ಪತ್ರಕರ್ತ ಎಂ.ವೆಂಕಟೇಶ, ಕೃತಿಯ ಬೆನ್ನುಡಿಯಲ್ಲಿ "ಹೈದ್ರಾಬಾದ್ -ಕರ್ನಾಟಕ ಪ್ರದೇಶವನ್ನು ಆಳಿದ ರಾಷ್ಟ್ರಕೂಟರು, ಕಳಚೂರಿಗಳು ಇತ್ಯಾದಿ ಕಾಲದ ಕಲೆ, ಸಂಸ್ಕೃತಿ, ಸಾಹಿತ್ಯ, ಕೋಟೆ-ಕೊತ್ತಲು, ಹಸ್ತಪ್ರತಿ, ಶಾಸನಗಳ ಅಪೂರ್ವ ಮಾಹಿತಿಯ ಮಹಾ ಭಂಡಾರವನ್ನೇ ಓದುಗರ ಮುಂದಿಟ್ಟಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ಡಿ.ಎನ್‌. ಅಕ್ಕಿ
(03 October 1948)

ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು.  ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ.  ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ...

READ MORE

Related Books