ರವೀಂದ್ರ ಭಟ್ಟ ಅವರ ಲೇಖನಗಳ ಸಂಗ್ರಹ ‘ಜನಕಂಜಿ ನಡೆಯದವರ ಸಂತೆ’. ರವೀಂದ್ರ ಭಟ್ಟ ಅವರು ಪ್ರಜಾವಾಣಿಯಲ್ಲಿ ಮುಖ್ಯ ವರದಿಗಾರನಾಗಿದ್ದಾಗ ಬರೆದ ರಾಜಕೀಯ ಲೇಖನಗಳು ಈ ಪುಸ್ತಿಕೆಯಲ್ಲಿವೆ.
ಪುಸ್ತಕದ ಪರಿವಿಡಿಯಲ್ಲಿ ಸತ್ತಂತಿಹರನು ಬಡಿದೆಚ್ಚರಿಸು!, ಮನಕಂಜಿ, ಜನಕಂಜಿ ನಡೆಯದವರ ಸಂತೆ!, ಎಲ್ಲೆಲ್ಲೋ ಇದೆ ಸಮ್ಮನೆ, ಮೇಲ್ಮನೆಯಲ್ಲಿರುವೆ ಸುಮ್ಮನೆ!, ನಾಯಿನ ಕುರಿ ಮಾಡೋ ಯತ್ನ ಫಲಿಸಲ್ಲ, ಹತ್ತು ವರ್ಷದಲ್ಲಿ ರೈತರು ಅಲ್ಪಸಂಖ್ಯಾತರು, ಕೂಗಾಡಿದರೆ ಮಾತ್ರ ಸಮರ್ಥ ಪ್ರತಿಪಕ್ಷ ನಾಯಕನಾ? ಒತ್ತಡಕ್ಕೆ ಮಣಿದಿಲ್ಲ, ಮಣಿಯುವುದೂ ಇಲ್ಲ!, ಸ್ವಾವಲಂಬನೆಯ ಹೆಬ್ಬಾಗಿಲು, ಕುವೆಂಪು ಮತ್ತು ರಾಜಕೀಯ, ಸುಳಿವಿಲ್ಲದೇ ಕೊಳ್ಳೆ!, ಅರ್ಕಾವತಿ ಆರ್ತನಾದ! ಸೇರಿದಂತೆ 48 ಶೀರ್ಷಿಕೆಗಳ ರಾಜಕೀಯ ಲೇಖನಗಳು ಈ ಸಂಕಲನದಲ್ಲಿವೆ.
ರವೀಂದ್ರ ಭಟ್ಟ ಅವರು ಪ್ರಸ್ತುತ `ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರು. ಅವರ ಊರು ಉತ್ತರ ಕನ್ನಡ ಜಿಲ್ಲೆಯ ಐನಕೈ. ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಬದುಕು ಹಾಗೂ ಬರಹಗಳಲ್ಲಿ ಮಾನವೀಯ ಅಂತಃಕರಣವೇ ಪ್ರಧಾನ. `ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರಿಗೆ ಕರ್ನಾಟಕ ಸರ್ಕಾರದ ``ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’’ ಪುರಸ್ಕೃತರು. `ಮೂರನೇ ಕಿವಿ’ ಪುಸ್ತಕ ಅವರ ಐದನೇ ಕೃತಿ. ...
READ MORE