ಸಂರಚನೆಯ ಸುತ್ತಮುತ್ತ

Author : ಸದಾನಂದ ನಾರಾವಿ

Pages 128

₹ 100.00




Year of Publication: 2015
Published by: ಜಾಗೃತಿ ಪ್ರಿಂಟರ್ಸ್
Address: ನಂ. 56/1-6, ನರಸಿಂಹಯ್ಯ ಗಾರ್ಡನ್, ಕೊಟ್ಟಿಗೆಪಾಳ್ಯ, ಮಾಗಡಿ ಮುಖ್ಯರಸ್ತೆ, ಬೆಂಗಳೂರು-560 091.

Synopsys

‘ಸಂರಚನೆಯ ಸುತ್ತಮುತ್ತ’ ಸದಾನಂದ ನಾರಾವಿ ಅವರ ಲೇಖನಗಳ ಸಂಕಲನ. ವಿವಿಧ ಪತ್ರಿಕೆಗಳಿಗಾಗಿ ಬರೆದ 21 ಲೇಖನಗಳಿವೆ. ತಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಕುರಿತು ಬರೆದ ಲೇಖನಗಳು ಚಿಂತನಾರ್ಹವಾಗಿವೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುತ್ತಲೇ ಸಾರ್ವಜನಿಕರ ಹೊಣೆಯನ್ನೂ ಎಚ್ಚರಿಸುತ್ತಾರೆ. ಬಹುತೇಕರು ನಿರ್ಲಕ್ಷಿಸಬಹುದಾದ ವಿಷಯ ವಸ್ತುವನ್ನೇ ಇವರು ಲೇಖನಗಳ ಚೌಕಟ್ಟಿನಲ್ಲಿ ತುಂಬುತ್ತಾರೆ.  ಸುತ್ತಮುತ್ತಲಿನ ಇಂತಹ ಸಣ್ಣ ಸಣ್ಣ ಸಮಸ್ಯೆಗಳೇ ಜಾಗತಿಕ ಸಮಸ್ಯೆಗಳ ರೂಪ ಪಡೆಯುತ್ತವೆ ಎಂಬುದು ಇಲ್ಲಿಯ ಲೇಖನಗಳ ಎಚ್ಚರಿಕೆಯೂ ಆಗಿದೆ.

About the Author

ಸದಾನಂದ ನಾರಾವಿ

ಸದಾನಂದ ನಾರಾವಿಯವರು ಅಂಚೆ ಇಲಾಖೆಯಲ್ಲಿ 29 ವರ್ಷ ಸೇವೆಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುವ ಸದಾನಂದ ನಾರಾವಿಯವರು 'ಮುತ್ತುಮಲ್ಲಿಗೆ', 'ಸಂರಚನೆಯ ಸುತ್ತಮುತ್ತ' (ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ ವಿಜೇತ ಕೃತಿ), 'ಉಜ್ರೆ ಈಶ್ವರ ಭಟ್', 'ಡಾ.ಕೆ, ಪ್ರಭಾಕರ ಆಚಾರ್' ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರಶಸ್ತಿ, ತುಳು ಕತೆಯೊಂದಕ್ಕೆ ತುಳು ಒಕ್ಕೂಟದ ಪ್ರಥಮ ಬಹುಮಾನ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದಾರೆ. ತುಳು ಭಾಷೆ ಹಾಗೂ ಸಂಸ್ಕೃತಿಗೆ ಸದಾನಂದ ನಾರಾವಿಯವರ ...

READ MORE

Related Books