ತಾರಿ ದಂಡೆ

Author : ಜಯಂತ ಕಾಯ್ಕಿಣಿ

Pages 192

₹ 250.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ತಾರಿ ದಂಡೆ’ ಕೃತಿಯು ಜಯಂತ್ ಕಾಯ್ಕಿಣಿ ಅವರ ಬಿಡಿ ಬರಹಗಳ ಸಂಕಲನವಾಗಿದೆ. ಇಲ್ಲಿ ಲೇಖಕರ ಅಂಕಣ ಬರಹ, ವ್ಯಕ್ತಿರೇಷೆ ಹಾಗೂ ಓದಿನ ಪ್ರತಿಫಲನಗಳು ಹೊಸ ರೂಪವನ್ನು ಪಡೆದುಕೊಂಡಿದೆ. ತಾರಿ ದಂಡೆ ಅಂದರೆ ನದಿ ದಾಟಿಸುವ ದೋಣಿಯನ್ನು ಜನ ಹಿಡಿಯುವ ಜಾಗ ಈ ದಂಡೆಯಿಂದ ಕಾಣುವ ಆಚೆ ತಡಿಯ ಅವ್ಯಕ್ತ ಆಕರ್ಷಣೆಯೇ ಬೇರೆ. ಕೇವಲ ಪ್ರಾಕೃತಿಕ ಸೌಂದರ್ಯದ ಕ್ಯಾಲೆಂಡರ್ ನೋಟದ ನಿರ್ಜನ ರಮಣೀಯಂತೆ ಅಲ್ಲ. ಅಲ್ಲೂ ಜನ ಜೀವನ ಇದೆ ಎಂಬ ಅಂಶದಿಂದಲೇ ಮೂಡಿಬಂದ ಸೆಳೆತ ಅದು. ಅಲ್ಲಿಂದ ದಾರಿ ಮತ್ತೆಲ್ಲೋ ಹೋಗುತ್ತದೆ. ತಟದಲ್ಲಿ ಮರವಿದ್ದರೆ ನದಿಗೆ ಹಿಗ್ಗು. ಅದು ತನ್ನ ಉಡಿಗೆ ಬಿದ್ದ ಹೂಗಳನ್ನು ಎಲೆಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಹರಿಯುತ್ತಲೇ ಇರುತ್ತದೆ. ಆಗ ಮರ ಯಾವುದು? ನದಿ ಯಾವುದು? ಎನ್ನುವುದೇ ಗೊತ್ತಾಗಲ್ಲ ಎಂದಿದ್ದಾರೆ ಇಲ್ಲಿ ಲೇಖಕರು.

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Related Books