ದಲಿತ ಚಳವಳಿ ಚರಿತ್ರೆ ಸಂಪುಟ-6

Author : ವಿ. ಮುನಿವೆಂಕಟಪ್ಪ

Pages 474

₹ 470.00




Year of Publication: 2013
Published by: ಎಸ್.ಎಂ.ಎಸ್. ಪಬ್ಲಿಕೇಷನ್ಸ್
Address: # 61, 6ನೇ ಅಡ್ಡರಸ್ತೆ, ಹೆಬ್ಬಾಳ ಮುಖ್ಯರಸ್ತೆ, ಕಾವೇರಿ ಗ್ರಾಮೀಣ ಬ್ಯಾಂಕ್ ಸಮೀಪ, ಮಂಚೇಗೌಡನಕೊಪ್ಪಲು, ಮೈಸೂರು-570017

Synopsys

ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ದಲಿತ ಚಳವಳಿ ಚರಿತ್ರೆ ಸಂಪುಟ- 6. ಕರ್ನಾಟಕದಲ್ಲಿ (1970) ಹುಟ್ಟಿದ ದಲಿತ ಚಳವಳಿಯು ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾಯಿತು. ಆದರೆ, ಸೂಕ್ತ ನಾಯಕತ್ವದ ಅಭಾವದ ಪರಿಣಾಮ ಸುಮಾರು 10 ವರ್ಷಗಳ ನಂತರ ಕುಸಿಯುತ್ತಾ ನಡೆಯಿತು. ಈ ಮಧ್ಯೆ, ಬುದ್ಧ-ಬಸವ ಹಾಗೂ ಅಂಬೇಡ್ಕರರ ವಿಚಾರಧಾರೆಯನ್ನು ಸಮಾಜದಲ್ಲಿ ಹರಡಲು ಸಾಧ್ಯವಾಯಿತು. 

ಸಾಹಿತಿ ಡಾ. ವಡ್ಡಗೆರೆ ನಾಗರಾಜಯ್ಯ ಅವರು ಕೃತಿಗೆ ಮುನ್ನುಡಿ ಬರೆದು, ಲೇಖಕರ ದಲಿತ ಸಾಹಿತ್ಯ, ದಲಿತ ಚಳವಳಿಯ ಹಾಗೂ ಚಳವಳಿಯೊಂದಿಗೆ ಸಹಕರಿಸಿದ ಬಂಡಾಯ ಸಾಹಿತ್ಯ ಸೇರಿದಂತೆ ಇತರೆ ದಲಿತೇತರ ಸಾಹಿತ್ಯ ಹಾಗೂ ಚಳವಳಿ ಸಾಹಿತ್ಯ ತೋರುವ ತೀಕ್ಷಣ ದೃಷ್ಟಿ ಹೇಗೆ ಚಳವಳಿಯೊಂದರ ಯಶಸ್ವಿಗೆ ಕಾರಣವಾಯಿತು ಎಂಬುದರ ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸಿದ್ದನ್ನು ಪ್ರಶಂಸಿಸಿದ್ದಾರೆ.

About the Author

ವಿ. ಮುನಿವೆಂಕಟಪ್ಪ

ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...

READ MORE

Related Books