ವಾಗ್ದೇವಿಯ ಭಂಡಾರದ ಮುದ್ರೆ

Author : ಶಾಂತಿನಾಥ ದಿಬ್ಬದ

Pages 156

₹ 100.00




Year of Publication: 2002
Published by: ರತ್ನತ್ರಯ ಪ್ರಕಾಶನ
Address: ನಂದಿಹಳ್ಳಿ, ಸಂಡೂರು

Synopsys

‘ವಾಗ್ದೇವಿಯ ಭಂಡಾರದ ಮುದ್ರೆ ’ಶಾಂತಿನಾಥ ದಿಬ್ಬದ ಅವರ ಲೇಖನಗಳ ಸಂಗ್ರಹವಾಗಿದೆ. ಆದಿ ಕವಿ ಪಂಪ ಹಾಗೂ ಕನ್ನಡದ ರತ್ನ ರನ್ನ ಇಬ್ಬರನ್ನೂ ಅವರವರ ಕಾವ್ಯಶ್ರೀ ಮೂಲಕ ಅರ್ಥೈಸುತ್ತ ಏಕಕಾಲಕ್ಕೆ ಗತವನ್ನೂ ಪರಿಚಯಿಸಿದ ಕೃತಿಯಿದು.

About the Author

ಶಾಂತಿನಾಥ ದಿಬ್ಬದ
(01 June 1953)

.ಡಾ. ಶಾಂತಿನಾಥ ದಿಬ್ಬದ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸೋಮಾಪುರ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ, ಪಿಎಚ್ ಡಿ ಪದವೀಧರರು. ಕರ್ನಾಟಕ ವಿ.ವಿ, ಗುಲಬರ್ಗಾ ವಿ.ವಿ. ಯಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಿ.ವಿ. ಯಲ್ಲಿ ಪ್ರಾಧ್ಯಾಪಕರಾಗಿ ನಂತರ ಕುಲಸಚಿವರಾಗಿ 2015 ರಲ್ಲಿ ನಿವೃತ್ತರಾದರು.   ಕೃತಿಗಳು: ಮಹಾಕವಿ ಪಂಪ ಮತ್ಯು ಅವನ ಕೃತಿಗಳು, ಪಂಪ ಭಾರತ ಸಾಂಸ್ಕೃತ ಅಧ್ಯಯನ (ಪಿಎಚ್ ಡಿ ಮಹಾಪ್ರಬಂಧ), ವಾಗ್ದೇವಿಯ ಭಂಡಾರದ ಮುದ್ರೆ, ಆಗಮಿಕ, ಜೀವಪರ-ಜನಪರ, ಜೈನ ಸಂಸ್ಕೃತಿ ಸಮೀಕ್ಷೆ (ಸಂಪಾದತ ಕೃತಿಗಳು) ಭ್ರಾಜಿಷ್ಣು ವಿರಚಿತ ಆರಾಧನಾ ಕರ್ಣಾಟಟೀಕಾ(ವಡ್ಡಾರಾಧನೆ), ಮುನಿ ...

READ MORE

Reviews

ಹೊಸತು- 2003- ಫೆಬ್ರವರಿ

ಆದಿ ಕವಿ ಪಂಪ ಹಾಗೂ ಕನ್ನಡದ ರತ್ನ ರನ್ನ ಇಬ್ಬರನ್ನೂ ಅವರವರ ಕಾವ್ಯಶ್ರೀ ಮೂಲಕ ಅರ್ಥೈಸುತ್ತ ಏಕಕಾಲಕ್ಕೆ ಪರಿಚಯಿಸಿದ ಕೃತಿಯಿದು. ಇಬ್ಬರೂ ಕನ್ನಡ ಸಾಹಿತ್ಯದಲ್ಲಿ ಸೂರ್ಯ-ಚಂದ್ರರಂತೆ ಪ್ರಕಾಶಿಸಿದರು ಹಾಗೂ ವಾಗ್ಗೇವಿಯ ಸಾಹಿತ್ಯ ಭಂಡಾರದ ಮುದ್ರೆಯನ್ನೊಡೆದು ಅನರ್ಘ ಜ್ಞಾನ ಸಂಪದವನ್ನು ಸೂರೆಗೈದವರು. ಮುಖ್ಯವಾಗಿ ಪಂಪ ಭಾರತ ಹಾಗೂ ಆದಿಪುರಾಣಗಳನ್ನು ಪ್ರಸ್ತಾಪಿಸಿ, ಪಂಪನ ನೆರಳು ರನ್ನನ ಮೇಲೆ ಬಿದ್ದ ಪ್ರಮಾಣವನ್ನೂ ಅಳೆದು ಇಬ್ಬರನ್ನೂ ಉತ್ತಮ ಕವಿಗಳೆಂದು ಚರ್ಚಿಸಲಾಗಿದೆ.

Related Books