ಮರ್ಯಾದಸ್ಥ ಮನುಷ್ಯರಾಗೋಣ

Author : ಬರಗೂರು ರಾಮಚಂದ್ರಪ್ಪ

Pages 208

₹ 170.00




Year of Publication: 2017
Published by: ಅಂಕಿತ ಪುಸ್ತಕ
Address: #ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು-560004

Synopsys

ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪನವರ ‘ಮರ್ಯಾದಸ್ಥ ಮನುಷ್ಯರಾಗೋಣ’ ಕೃತಿಯು ಸಾಮಾಜಿಕ- ಸಾಂಸ್ಕೃತಿಕ ವಿಚಾರಧಾರೆಗಳನ್ನು ಒಳಗೊಂಡ ಲೇಖನಗಳ ಸಂಕಲನವಾಗಿದೆ. ಇಲ್ಲಿರುವ ಲೇಖನಗಳು ಜಾತಿಯ ಹೆಸರಲ್ಲಿ ಜೈಲುಗಳಾಗುವ, ಧರ್ಮದ ಹೆಸರಲ್ಲಿ ದ್ವೀಪಗಳಾಗುವ ದ್ವೇಷದ ದಳ್ಳುರಿಗೆ ಮಾನವೀಯತೆಯನ್ನು ತಳ್ಳಿ ತಕಥೈ ಎಂದು ಕುಣಿಯುವ, ಬಂಡವಾಳವನ್ನೇ ಭಗವಂತನೆಂದು ಆರಾಧಿಸುವ ಪ್ರಯತ್ನಗಳು ಸೌಹಾರ್ದ ಮತ್ತು ಸಮಾನತೆಗಳನ್ನು ಹಿಂದಿನ ಸಾಲಿಗೆ ತಳ್ಳುತ್ತಿವೆ ಎನ್ನುವಂತಹ ವಿಚಾರಗಳನ್ನು ಒಳಗೊಂಡಿದೆ. ಇಂತಹ ಸನ್ನಿವೇಶದಲ್ಲಿ, ಮರ್ಯಾದಸ್ತ ಮನುಷ್ಯನಾಗುವುದೆಂದರ ಮನುಷ್ಯತ್ವವನ್ನು ಗೌರವಿಸುವುದು ಮತ್ತು ಮುನುಷ್ಯತ್ವವನ್ನು ಬದುಕುವುದು ಎನ್ನುವ ಬರಗೂರರ ವಿಶಿಷ್ಟ ಚಿಂತನ ಬರಹಗಳ ಸಂಕಲನವಿದು.

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books