ಗಂಧಗಾಳಿ

Author : ಎಚ್.ಎಲ್. ಪುಷ್ಪ

Pages 256

₹ 120.00




Year of Publication: 2006
Published by: ಅನ್ವೇಷಣೆ ಪ್ರಕಾಶನ
Address: 10-11, ಮಾತಾ ತನಿಷಾ ಅಪಾರ್ಟ್ಸ್ ಮೆಂಟ್ಸ್, 4ನೇ ತಿರುವು, ಕೆ.ಎಸ್.ಆರ್.ಟಿ.ಸಿ ಲೇಔಟ್, ಚಿಕ್ಕಲಸಂದ್ರ- 560061
Phone: 99005 66020

Synopsys

‘ಗಂಧಗಾಳಿ’ ಸಾಹಿತಿ, ಲೇಖಕಿ, ಎಚ್,ಎಲ್.ಪುಷ್ಪ ಅವರ ವಿಮರ್ಶಾಲೇಖನಗಳ ಸಂಕಲನ.  ಕನ್ನಡ ಕಾವ್ಯಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಾ. ಎಚ್.ಎಲ್. ಪುಷ್ಪ ಅವರು ವಿಮರ್ಶಾತ್ಮಕ ಲೇಖನಗಳ 'ಗಂಧಗಾಳಿ'ಯನ್ನು ಓದುಗ ವಲಯಕ್ಕೆ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಮೂಲತಃ ಕವಿಯಾದ ಇವರು ವಿಮರ್ಶೆಗೆ ತೊಡಗುವುದರಿಂದ ಎರಡು ರೀತಿಯ ಅನುಕೂಲಗಳಿವೆ ಒಂದು : ಓದುಗರಿಗೆ ಆಗುವ ಅನುಕೂಲ, ಸೃಜನಾತ್ಮಕವೆಂದು ಕರೆಯಲ್ಪಡುವ ಬರಹರೂಪಗಳಲ್ಲಿ ತೊಡಗಿದ ಮನಕ್ಕೊಂದು ಮತ್ತೊಂದು ಅಂತಹುದೇ ರೂಪದೊಳಗೆ ಪ್ರವೇಶಿಸಿ, ವಿಶ್ಲೇಷಿಸಿ, ಓದುಗರ ಮುಂದಿಡುವಾಗ ಸಹಜವಾಗಿಯೇ ಸಹೃದಯ ಸಂವಾದವೊಂದು ಸಾಧ್ಯವಾಗುತ್ತದೆ.

ಕವಿ ಮನಸ್ಸು ವಿಮರ್ಶೆಯ ನೆಲೆಯ ಮೂಲಕ ಬೇರ ಕೃತಿಗಳ ಒಡಲಲ್ಲಿ ಸಂಚರಿಸಿ ರೂಪಿಸುವ ನೋಟಗಳಿಗೆ ವಿಭಿನ್ನ ವಿನ್ಯಾಸ ಲಭ್ಯವಾಗಬಹುದು. ಪೂರ್ಣ ಪ್ರಮಾಣದ ವಿಮರ್ಶಕರಾಗದ ಈ ಮಾದರಿಯ ಮನಸ್ಸುಗಳು ಕಟ್ಟಿಕೊಡುವ ಬರಹದ ಬಣ್ಣ ಬೆಡಗುಗಳು ಬರೆದವರ ಇತಿಮಿತಿಗಳಿಗೆ ಒಳಪಟ್ಟಿರುತ್ತವೆಯೆಂಬುದು ನಿಜವಾದರೂ ಓದುಗರ ದೃಷ್ಟಿಯಿಂದ ವಿಶೇಷ ಅಭ್ಯಾಸಗಳಾಗಿ ಕಾಣಬಹುದು. ಯಾಕೆಂದರೆ ಸ್ವತಃ ಓದುಗರನ್ನು ಬಯಸುವ ಕವಿ ಮನಸ್ಸು (ವಿಮರ್ಶಕ' ಮನಸ್ಸಾಗಿ ಪರಿವರ್ತನೆ ಹೊಂದಿ ಕೃತಿಗಳನ್ನು ಪರಿಶೀಲಿಸುವುದರಿಂದ 'ಸಹೃದಯ ಸಂವಾದ' ಮುಖ್ಯವಾಗುವ ಸಾಧ್ಯತೆಯೇ ಹೆಚ್ಚು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಈ ಮಾದರಿಯ ಉದಾಹರಣೆಗಳು ಹೇರಳವಾಗಿವೆ. ಇವು ಕೃತಿಯೊಂದನ್ನು ಅರ್ಥೈಸಿಕೊಳ್ಳುವ ಮಾದರಿಗಳು; ಆದ್ದರಿಂದ ಈ ಕೃತಿ ಓದುಗರಿಗೆ ಒಂದು ಹೊಸ ವಿಮರ್ಶಾ ಮಾದರಿಯನ್ನು ನೀಡುತ್ತದೆ ಎನ್ನಬಹುದು. 

About the Author

ಎಚ್.ಎಲ್. ಪುಷ್ಪ
(18 September 1962)

ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್‌ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.  ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...

READ MORE

Related Books