ಬಲ್ಲಾಳ ದುರ್ಗದ ಭೀಕರ ಕಮರಿ

Author : ಗಿರಿಮನೆ ಶ್ಯಾಮರಾವ್

Pages 191

₹ 180.00




Year of Publication: 2021
Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರ ಬಡಾವಣೆ, ಸಕಲೇಶಪುರ-573134 (ಜಿಲ್ಲೆ ಹಾಸನ)
Phone: 9739626614

Synopsys

ಲೇಖಕ ಗಿರಿಮನೆ ಶಾಮರಾವ್ ಅವರ ಕೃತಿ-ಬಲ್ಲಾಳ ದುರ್ಗದ ಭೀಕರ ಕಮರಿ. ಭಾಗ-11 ಸರಣಿಯಲ್ಲಿ ಮಲೆನಾಡಿನ ರೋಚಕ ಕಥೆಗಳನ್ನು ವಿವರಿಸಲಾಗಿದೆ. ಮಲೆನಾಡಿನ ಪ್ರಕೃತಿ ಹೇಗೆ ವೈವಿಧ್ಯವೋ ಹಾಗೆ ಇಲ್ಲಿಯ ಜನರ ಬದಕು ವೈವಿಧ್ಯಮಯ. ಗಮನಿಸುವ ಕಣ್ಣಿದ್ದರೆ ಇಲ್ಲಿ ನಡೆಯುವ ರೋಚಕ ಘಟನೆಗಳಂತೂ ಬರೆದು ಮುಗಿಯದಷ್ಟು. ಪ್ರತಿ ಘಟನೆಯೂ ಒಂದೊಂದು ಕಥೆ. ಘಟನೆಗಳ ಜೊತೆ ಪ್ರಕೃತಿ ಹಾಗೂ ಬದುಕಿನ ಚಿತ್ರ ನೀಡಲು ಯತ್ನಿಸಿದ್ದೇನೆ. ಮಲೆನಾಡಿನ ಭಾಗಗಳಲ್ಲಾದ ಭೂಕುಸಿತ ಹಾಗೂ ಪ್ರವಾಹಗಳ ಅನಾಹುತಕಾರಿ ಚಿತ್ರಣವೂ ಇದೆ. ವೈವಿಧ್ದತೆ ಇರಲಿ ಎಂಬ ದೃಷ್ಟಿಯಿಂದ ಸಣ್ಣ ಕಥೆಗಳ ಕೃತಿಯನ್ನಾಗಿಸಿದ್ದೇನೆ’ ಎಂದು ಲೇಖಕರು ಸ್ಪಷ್ಟಪಡಿಸಿದ್ದಾರೆ.

 

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books