ಗುಣ ಗೌರವ

Author : ಗೌರೀಶ ಕಾಯ್ಕಿಣಿ

Pages 214

₹ 15.00




Year of Publication: 1979
Published by: ಶ್ರೀಗೌರೀಶ ಕಾಯ್ಕಿಣಿ ಸನ್ಮಾನ ಸಮಿತಿ
Address: ಕುಮಟಾ ಉ.ಕ - 581343

Synopsys

‘ಗುಣ ಗೌರವ’ ಹಿರಿಯ ಲೇಖಕ ಗೌರೀಶ ಕಾಯ್ಕಿಣಿ ಅವರ ಬಿಡಿ ಬರಹಗಳ ಸಂಕಲನ. ಈ ಕೃತಿಯನ್ನು ಗೌರೀಶ ಕಾಯ್ಕಿಣಿ ಅವರು ಅರವತ್ತೇಳನೆ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಶ್ರೀಗೌರೀಶ ಕಾಯ್ಕಿಣಿ ಸನ್ಮಾನ ಸಮಿತಿ ಪ್ರಕಟಿಸಿದ ಕೃತಿ. ಸಂಪಾದಕ ಸಮಿತಿ ಪರವಾಗಿ ಜಿ.ಎಸ್. ಅವಧಾನಿ ಅವರು ಮುನ್ನುಡಿ ಬರೆದಿದ್ದಾರೆ. ಇಲ್ಲಿ ಸುಬ್ಬಣ್ಣನ ಬಗೆಗೆ ಪುನರ್ವಿಚಾರ, ಕನ್ನಡ ಮೇಘದೂತದ ಪೀಠಿಕೆ, ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆಯ ಕೇಂದ್ರ ಪ್ರಮೆಯಗಳು, ಗೀತ ನಾಟಕಗಳು, ಕಡಲು ಮತ್ತು ಮುಗಿಲು, ರಸಿಕರಂಗರ ಭಾವಗೀತಗಳು, ಕಡೆಂಗೋಡ್ಲು ಮತ್ತು ಆಲಿವರ್ ಗೋಲ್ಡ್ ಸ್ಮಿಥ್, ರಸಾರ್ದ್ರ ವಿಮರ್ಶಕ, ಸ್ವಚ್ಛಂದದಿಂದ ನವ್ಯದತ್ತ ಹಾಗೂ ಭೈರಪ್ಪನವರ ಕಾದಂಬರಿಗಳಲ್ಲಿ ಧರ್ಮ ಎಂಬ ಬರಹಗಳು ಸಂಕಲನಗೊಂಡಿವೆ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books