ತಾರೀಖ್ ಏ ಆದಿಲಶಾಹಿ

Author : ಎ.ಎಲ್. ನಾಗೂರ

Pages 60

₹ 60.00




Year of Publication: 2012
Published by: ಹಂಬಲ ಪ್ರಕಾಶನ
Address: ಬಾಗಲಕೋಟೆ

Synopsys

ವಿಜಯಪುರದ ಆದಿಲಶಾಹಿ ಕಾಲದ ಅಜ್ಞಾತ ಸ್ಮಾರಕಗಳು, ಕಲೆ, ವಾಸ್ತುಶಿಲ್ಪ ,ಭಾಷೆ, ಸಂಸ್ಕೃತಿಗಳ ಕವಿಗಳು, ಉಪನಗರಗಳು, ಹಬಶಿ ಯೋಧರ ಕುರಿತಾದ ಹತ್ತು ಲೇಖನಗಳ ಸಂಗ್ರಹ ಕೃತಿ- 'ತಾರೀಖ್ ಏ ಆದಿಲಶಾಹಿ. ಈ ಲೇಖನಗಳು ಸಂಯುಕ್ತ ಕರ್ನಾಟಕ ಪತ್ರಿಕೆಯ ಬಸವ ಭೂಮಿ ಪುರವಣಿಯಲ್ಲಿ ಪ್ರಕಟಗೊಂಡಿವೆ. ಕೃತಿಯ ಕರ್ತೃ-ಎ.ಎಲ್. ನಾಗೂರ.

About the Author

ಎ.ಎಲ್. ನಾಗೂರ

ಲೇಖಕ, ಸಂಶೋಧಕ ಎ. ಎಲ್.ನಾಗೂರ ಅವರು ಹುಟ್ಟಿದ್ದು 1966ರಲ್ಲಿ. ಕನ್ನಡ ಉಪನ್ಯಾಸಕರು. ಸಂಶೋಧಕರು. ರಂಗಭೂಮಿ ಕಂಪನಿ ಮತ್ತು ಕಲಾವಿದರ ಕುರಿತ ಸಂಶೋಧನೆ, ಇತಿಹಾಸಿಕ ಸ್ಮಾರಕ, ಶಿಲ್ಪಗಳ ಕುರಿತು ಸಂಶೋಧನೆ, ದೇಶಗತಿ ಮನೆತನಗಳ ಕುರಿತು ಸಂಶೋಧನೆ ಅಲ್ಲದೆ, ಈವರೆಗೆ ಒಟ್ಟು 12 ಕನ್ನಡ, ಸಂಸ್ಕೃತ,ಪರ್ಷಿಯನ್, ಅರೇಬಿಕ್ ಶಾಸನಗಳನ್ನು ಬೆಳಕಿಗೆ ತಂದಿದ್ದಾರೆ. ಕಳೆದ 36 ವರ್ಷಗಳಿಂದ ಕವಿತೆ, ಲೇಖನಗಳ ಬರೆವಣಿಗೆ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭ ಪುರವಣಿಯಲ್ಲಿ ವಿಶೇಷ ಲೇಖನಗಳು ಪ್ರಕಟಗೊಂಡಿವೆ.  2012ರಲ್ಲಿ ಚಂದನ ದೂರದರ್ಶನದ 'ಬೆಳಗು' ಕಾರ್ಯಕ್ರಮದಲ್ಲಿ ಸಂದರ್ಶನ ಪ್ರಸಾರಗೊಂಡಿದ್ದು 2017ರಲ್ಲಿ ಕರ್ನಾಟಕ ಸರಕಾರದಿಂದ ' ರಾಜ್ಯ ಉತ್ತಮ ...

READ MORE

Related Books