ನಿಂಬೆ ಹಾಗಲ ಕೃತಿ ರವೀಂದ್ರ ಭಟ್ಟ ಐನಕ್ಕೆ ಅವರ ಬರಹಗಳ ಸಂಕಲನವಾಗಿದೆ. ಇರುವುದನ್ನು ಇದ್ದಂತೆಯೇ ಹೇಳುತ್ತ, ಒಳಿತು ಕೆಡುಕುಗಳನ್ನು ಎಂಗಡಿಸಿ ನಿರೂಪಿಸುವ ವಿಧಾನವನ್ನು ಈ ಕೃತಿಯುದ್ದಕ್ಕೂ ಕಾಣಬಹುದಾಗಿದೆ. ಏಕಮುಖ ಅಭಿಪ್ರಾಯದ ಬದಲು ಮತ್ತೊಂದು ಮಗ್ಗುಲ ಸತ್ಯವನ್ನು ಕಾಣುವ ಕಣ್ಣು ರವೀಂದ್ರ ಭಟ್ಟರ ಬರಹಗಳಲ್ಲಿದೆ. ಪುಸ್ತಕ ಬರಗೂರು ರಾಮಚಂದ್ರಪ್ಪ ಅವರ ಬೆನ್ನುಡಿಯಲ್ಲಿ ತಿಳಿಸಿದ್ದಾರೆ. ಈ ಪುಸ್ತಕದಲ್ಲಿ ಖೆಡ್ಡಾದಲ್ಲಿ ಬಿದ್ದ ಪ್ರತಿಪಕ್ಷಗಳು ,ಆಯಿ ಆಗಲಿ ಬೊಮ್ಮಾಯಿ, ಮಂತ್ರಿಯೆಂಬುವ ಮೊರೆವ ಹುಲಿ, ಅಯ್ಯೋ ರಾಮ ಮತ್ತೆ ಆಯಾರಾಮ, ಮೌಲ್ಯ: ಕಳೆದಲ್ಲೇ ಹುಡುಕೋಣ ,ಎಂಥಾ ಮೋಜಿನ ಕುದುರಿ ,'ಗುರು' ಲಘುವಾದರೆ ಹೇಗೆ ಸ್ವಾಮಿ ಕಸಾಪ ಅಂಗಳದಲ್ಲಿ ಕಮಲದ ಕಮಟು,ಪ್ರತಿಜ್ಞೆ ಎಂಬ ಪಾಪದ ಪಾಪ!, ಪ್ರೀತಿಯ ಅಪ್ಪುಗೆಗೆ ಕಾಯ್ದೆ ಬೇಡವೇ?, ಮಳೆ ಬಂದು ಬಣ್ಣ ಬಯಲಾಯ್ತು ಇದೆಂಥಾ ಪ್ರಜಾಪ್ರಭುತ್ವ ಸ್ವಾಮಿ, ಮತದಾರನೊಬ್ಬನೇ ವೆಂಕಟರಮಣ, ನಾಮದ ಬಲವೊಂದಿದ್ದರೆ ಸಾಲದು ಗಡ್ಡಕ್ಕೆ ಬೆಂಕಿ ಬಿದ್ದಿದೆ, ಟೊಂಕ ಕಟ್ಟುವವರಿಲ್ಲ ಸಿ.ಡಿ. ಕೇಡಿಗಳ ನಡುವೆ ಮಾನಗೇಡಿಗಳು ಸಂತೋಷಕ್ಕೆ ಪಾಠ ಸಂತೋಷಕ್ಕೆ ಇವರು ಎಂಥಾ ನಾಯಕರಯ್ಯಾ ಆರುವ ಮುನ್ನ ಏರುವ ಬೆಂಕಿ ಓದು ಹವ್ಯಾಸ, ಮೊಬೈಲ್ ಚಟ ಶ್ವಾಸ ಉಳಿಸಲಷ್ಟೇ ಅವಿಶ್ವಾಸ 'ಗಾಂಧಿ' ಬಜಾರ್ನಲ್ಲಿ ಏಕಾಂಕ ಬೇಕು, ಮಾತು ತಪ್ಪದ ಮಗ ರಾಜಕಾರಣಿಗಳ ಲೇಖನ ಪ್ರೀತಿ ಕೊರೊನಾ ಕಾಲದ ಕರ್ಕಶ ಹೀಗೆ 56 ಪರಿವಿಡಿಗಳನ್ನು ಹೊಂದಿದೆ.
ರವೀಂದ್ರ ಭಟ್ಟ ಅವರು ಪ್ರಸ್ತುತ `ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರು. ಅವರ ಊರು ಉತ್ತರ ಕನ್ನಡ ಜಿಲ್ಲೆಯ ಐನಕೈ. ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಬದುಕು ಹಾಗೂ ಬರಹಗಳಲ್ಲಿ ಮಾನವೀಯ ಅಂತಃಕರಣವೇ ಪ್ರಧಾನ. `ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರಿಗೆ ಕರ್ನಾಟಕ ಸರ್ಕಾರದ ``ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’’ ಪುರಸ್ಕೃತರು. `ಮೂರನೇ ಕಿವಿ’ ಪುಸ್ತಕ ಅವರ ಐದನೇ ಕೃತಿ. ...
READ MORE