ಮರೆಯಲಾಗದ ಮುಂಬಯಿ ಕರ್ನಾಟಕ

Author : ಶ್ರೀನಿವಾಸ ಹಾವನೂರ

Pages 172

₹ 72.00




Year of Publication: 2006
Published by: ಡಾ.ಶ್ರೀನಿವಾಸ ಹಾವನೂರ
Address: ನಂ.36, ವಿನಾಯಕ ಲೇಔಟ್, ವಿಜಯ ನಗರ್, 3ನೇ ಸ್ಟೇಜ್, ಬೆಂಗಳೂರು- 560040
Phone: 08023384529

Synopsys

ಡಾ. ಶ್ರೀನಿವಾಸ ಹಾವನೂರ ಅವರು ರಚಿಸಿ, ಪ್ರಕಟಿಸಿರುವ ಕೃತಿ ‘ಮರೆಯಲಾಗದ ಮುಂಬಯಿ ಕರ್ನಾಟಕ’ ಐತಿಹಾಸಿಕ ಒಳ ನೋಟಗಳು. ಈ ಕೃತಿಯ ಕುರಿತು ಬರೆಯುತ್ತಾ ಇಲ್ಲಿಯ ಲೇಖನಗಳು ಇತಿಹಾಸ ಸಂಶೋಧನೆಗೆ ಸಂಬಂಧಿಸಿವೆಯಾದರೂ ಸಂಶೋಧನ ಪ್ರಬಂಧದ ರೀತಿಯಲ್ಲಿ ವಿಷಯವನ್ನು ಮಂಡಿಸದೇ, ಸಾಮಾನ್ಯ ವಾಚಕರಿಗೆ ಆಸಕ್ತಿ ಹುಟ್ಟಲೆಂದು ಕಥನಾತ್ಮಕವಾಗಿ ನಿರೂಪಣೆ ಮಾಡಲಾಗಿದೆ. ಮತ್ತು ಈ ಲೇಖನಗಳಿಗಾಗಿ ಉಪಯೋಗಿಸಿಕೊಂಡ ಆಕರ ಸಾಮಗ್ರಿಯ ಪಟ್ಟಿಯನ್ನು ಕೊನೆಯನ್ನು ಕೊಟ್ಟಿದೆ ಎಂದಿದ್ದಾರೆ ಶ್ರೀನಿವಾಸ ಹಾವನೂರ. ಈ ಕೃತಿಯಲ್ಲಿ ‘ಮುಂಬಯಿ ಕರ್ನಾಟಕ’ ಎಂಬ ಪರಿಕಲ್ಪನೆ, ಮುಂಬಯಿ ಕರ್ನಾಟಕದ ಪೂರ್ವೇತಿಹಾಸ, ಪುಣೆಯಲ್ಲಿ ಪೇಶ್ವೆ ಮತ್ತು ಬ್ರಿಟಿಶರು, ಮೊಂಡಗೈ ಭೀಮರಾಯ, ತಳ್ಳಿ- ನ್ಯಾಯ ಸಾಧನೆಯ ವಿಚಿತ್ರ ಪದ್ಧತಿ, ಕಿತ್ತೂರಿನ ಇತಿಹಾಸ- ಬೆಳಕಿಗೆ ಬಂದಿರದ ಕೆಲ ವಿಷಯಗಳು, ಸಂಗೊಳ್ಳಿ ರಾಯಣ್ಣ- ಬ್ರಿಟಿಶ್ ದಾಖಲೆಗಳು ರೂಪಿಸಿದಂತೆ, ಕಿತ್ತೂರಿನ ಕಿರಿಯ ರಾಣಿ ವೀರಮ್ಮ, ಮುಧೋಳ ರಾಜನ ಪರಕಾಯ ಪ್ರವೇಶ, ದತ್ತಕವಿಧಿ- ಕೆಲ ವಿಶಿಷ್ಟ ಘಟನೆಗಳು, ಕರ್ನಾಟಕ ಏಕೀಕರಣದ ಮೊದಲ ಪ್ರಯತ್ನ, ಆಡಳಿತ, ಶಿಕ್ಷಣ ರಂಗಗಳಲ್ಲಿ ಭಾಷಾ ಮಾಧ್ಯಮ ಸಮಸ್ಯೆ, ಪ್ರಾಥಮಿಕ ಶಿಕ್ಷಣ ಸಾಗಿ ಬಂದ ದಾರಿ, ಅಂದಿನ ಶಾಲೆಗಳು ಮತ್ತು ಶಿಕ್ಷಣ, ಮುಲ್ಕೀ ಶಾಲೆಗಳ ವಿಸಿಟ್- ಬುಕ್, ಇಂಗ್ಲಂಡಿನ ಬಡ ಕೂಲಿಕಾರರು: ನಮ್ಮಲ್ಲಿಯ ಶ್ರೀಮಂತ ರೈತರು, ಯುರೋಪಿಯನ್ನರು ಕಂಡ ಧಾರವಾಡ, ಧಾರವಾಡ ಕರ್ನಾಟಕ ಕಾಲೇಜಿನ ಪ್ರವಸ ವೇದನೆ, ಹಾವನೂರಲ್ಲಿ ವಿನೋಬಾಜಿ ಹೆಜ್ಜೆ ಗುರುತು ಎಂಬ 19 ಲೇಖನಗಳು ಸಂಕಲನಗೊಂಡಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books