ನಡುಹಗಲಿನಲ್ಲಿಕಂದೀಲುಗಳು

Author : ರಾಜೇಂದ್ರ ಚೆನ್ನಿ

Pages 276

₹ 125.00




Year of Publication: 2003
Published by: ಲೋಹಿಯ ಪ್ರಕಾಶನ
Address: ಕ್ಷಿತಿಜ, ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ-583103
Phone: 839225741

Synopsys

‘ನಡುಹಗಲಿನಲ್ಲಿ ಕಂದೀಲುಗಳು’ ರಾಜೇಂದ್ರ ಚೆನ್ನಿ ಅವರ ಲೇಖನಗಳಾಗಿವೆ. ನವೋದಯ-ನವ್ಯ ಕಾಲದಲ್ಲಿ ಬಂದಿರುವ ಸಾಹಿತ್ಯ ಕೃತಿಗಳನ್ನು ಇಲ್ಲಿನ ತಮ್ಮ ವಿಮರ್ಶಾ ಲೇಖನಗಳ ವಸ್ತುವನ್ನಾಗಿ ರಾಜೇಂದ್ರ ಚೆನ್ನಿಯವರು ಆಯ್ಕೆ ವಿಮರ್ಶೆಯೆಂದರೆ ಟೀಕೆಯಲ್ಲದ ಒಂದು ಸಾಂಸ್ಕೃತಿಕ ಮುನ್ನೋಟದ ಜೊತೆಗೆ ಪ್ರಪಂಚದ ಬದುಕು ಮತ್ತು ಅದರೊಂದಿಗಿನ ಸಂಬಂಧಗಳನ್ನು ಕೃತಿಯ ಪಾತ್ರಗಳ ಆಧಾರದ ಮೂಲಕ ಚರ್ಚೆಗೊಳಪಡಿಸುತ್ತ ಓದುಗನಿಗೊಂದು ಒಳಹರಿವನ್ನು ಒದಗಿಸುವ ಪ್ರಯತ್ನ ಮಾಡಿದ್ದಾರೆ.

About the Author

ರಾಜೇಂದ್ರ ಚೆನ್ನಿ
(21 October 1955)

ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...

READ MORE

Reviews

ಹೊಸತು-2004- ನವೆಂಬರ್‌

ನವೋದಯ-ನವ್ಯ ಕಾಲದಲ್ಲಿ ಬಂದಿರುವ ಸಾಹಿತ್ಯ ಕೃತಿಗಳನ್ನು ಇಲ್ಲಿನ ತಮ್ಮ ವಿಮರ್ಶಾ ಲೇಖನಗಳ ವಸ್ತುವನ್ನಾಗಿ ರಾಜೇಂದ್ರ ಚೆನ್ನಿಯವರು ಆಯ್ಕೆ ವಿಮರ್ಶೆಯೆಂದರೆ ಟೀಕೆಯಲ್ಲದ ಒಂದು ಸಾಂಸ್ಕೃತಿಕ ಮುನ್ನೋಟದ ಜೊತೆಗೆ ಪ್ರಪಂಚದ ಬದುಕು ಮತ್ತು ಅದರೊಂದಿಗಿನ ಸಂಬಂಧಗಳನ್ನು ಕೃತಿಯ ಪಾತ್ರಗಳ ಆಧಾರದ ಮೂಲಕ ಚರ್ಚೆಗೊಳಪಡಿಸುತ್ತ ಓದುಗನಿಗೊಂದು ಒಳಹರಿವನ್ನು ಒದಗಿಸುವ ಪ್ರಯತ್ನ ಮಾಡಿದ್ದಾರೆ. ಸಾಹಿತ್ಯ ರಚನೆಯ ಕಾಲಕ್ಕೆ ಯಾವ ತಾತ್ವಿಕ ಆಧಾರದಿಂದ ಬದುಕು ಕೃತಿಕಾರನನ್ನು ಬಂಧಿಸಲ್ಪಟ್ಟಿತ್ತು ಮತ್ತು ಪರಂಪರೆಯನ್ನು ಮೀರುವ ಇಲ್ಲವೇ ಮೀರದಂಥ ಇಕ್ಕಟ್ಟು ಎಲ್ಲೆಲ್ಲಿ ಪ್ರಾಪ್ತವಾಗಿತ್ತು ಎಂಬುದರ ವಿಶ್ಲೇಷಣೆಯಿದೆ. ಇಲ್ಲಿ ಕಾರಂತ-ಕುವೆಂಪು-ತೇಜಸ್ವಿಯವರಂತೆ ನೋಮ್ ಚೋಮ್‌ ಸ್ಕಿ ಶೇಕ್ಸ್‌ಪಿಯರ್ ಕೂಡ ಅಷ್ಟೇ ಮುಖ್ಯರಾಗುತ್ತಾರೆ.

Related Books